ಅಪ್ಪನ ಫೋಟೋ ಹಿಡಿದು ಕೆಲಸಕ್ಕೆ ಹೊರಟ್ರು ಅಭಿಷೇಕ್ ಅಂಬರೀಶ್

Public TV
1 Min Read

ಬೆಂಗಳೂರು: ತಂದೆ ಅಂಬರೀಶ್ ನಿಧನದ ಬಳಿಕ ದುಃಖದಲ್ಲಿದ್ದ ಪುತ್ರ ಅಭಿಷೇಕ್ ಇಂದಿನಿಂದ ತಮ್ಮ ಉದ್ಯೋಗದತ್ತ ಮುಖ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ಪನ ಫೋಟೋ ಹಿಡಿದುಕೊಂಡಿರೋ ತನ್ನ ಫೋಟೋವೊಂದನ್ನು ಅಭಿಷೇಕ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆ ಫೋಟೋದ ಮೇಲೆ ಮತ್ತೆ ಕೆಲಸಕ್ಕೆ ತೆರಳುತ್ತಿರುವೆ. ನನ್ನಪ್ಪ ರೆಬೆಲ್ ಇದನ್ನೆಲ್ಲ ನೋಡುತ್ತಿದ್ದಾರೆ ಅಂತಾ ಭಾವುಕವಾಗಿ ಬರೆದುಕೊಂಡಿದ್ದಾರೆ.

ಸದ್ಯ ಅಪ್ಪನ ಫೋಟೋ ಹಿಡಿದು ಮತ್ತೆ ಕೆಲಸಕ್ಕೆ ಹೋಗುತ್ತಿರುವೆ ಅಂತಾ ಬರೆದಿರುವ ಅಭಿಗೆ ಅಭಿಮಾನಿಗಳು, ತಂದೆ ನಿಮಗೆ ಸದಾ ಹಾರೈಸುತ್ತಿರುತ್ತಾರೆ. ಹಾಗೆಯೇ ನಿಮ್ಮ ಸಿನಿಮಾ ಕ್ಷೇತ್ರದ ಜರ್ನಿ ಚೆನ್ನಾಗಿರಲಿ ಅಂತಾ ಎಲ್ಲರೂ ಶುಭ ಹಾರೈಸಿದ್ದಾರೆ.

ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *