ಮಚ್ಚು ಹಿಡಿದು ಸಚಿವರ ಕಾರಿನ ಮೇಲೆ ದಾಳಿ-ವಿಡಿಯೋ ನೋಡಿ

Public TV
1 Min Read

ಚೆನ್ನೈ: ಕೈಮಗ್ಗ ಮತ್ತು ವಸ್ತ್ರೋದ್ಯಮ ಸಚಿವ ಓ.ಎಸ್ ಮಣಿಯನ್ ಕಾರಿನ ಮೇಲೆ ಸಂತ್ರಸ್ತರ ಗುಂಪೊಂದು ಮಚ್ಚು ಹಿಡಿದು ದಾಳಿಗೆ ಯತ್ನಿಸಿದ ಘಟನೆ ತಮಿಳುನಾಡಿದ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ಸಚಿವ ಓ.ಎಸ್.ಮಣಿಯನ್ ತಮ್ಮ ವೆರಣ್ಯಂ ವಿಧಾನಸಭಾ ಕ್ಷೇತ್ರದ ನಾಗಪಟ್ಟಣಂನಲ್ಲಿ ಗಜ ಚಂಡಮಾರುತದಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಪರಿಶೀಲನೆ ನಡೆಸಿ ವಾಪಾಸ್ಸಾಗುತ್ತಿರುವಾಗ ಏಕಾಏಕಿ ಉದ್ರಿಕ್ತರ ಗುಂಪೊಂದು ಕೈಯಲ್ಲಿ ಮಚ್ಚು ಹಿಡಿದು, ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದರು.

ಸಚಿವರ ಕಾರನ್ನು ಸುತ್ತುವರಿದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಕಾರು ಚಾಲಕ ರಭಸವಾಗಿ ಕಾರನ್ನು ಹಿಂದಕ್ಕೆ ಪಡೆದು, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ಸಂಬಂಧ 6 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಿಂದಾಗಿ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *