ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್?

Public TV
1 Min Read

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ವೀರ ಮದಕರಿ ಚಿತ್ರದ ವಿಚಾರವಾಗಿ ಪೈಪೋಟಿ ಶುರುವಾಗಿದೆ. ಇವರಿಬ್ಬರೂ ಮದಕರಿ ನಾಯಕನ ಜೀವನಾಧಾರಿತ ಚಿತ್ರದಲ್ಲಿ ನಟಿಸಿಯೇ ತೀರುವ ಪಣ ತೊಟ್ಟಿದ್ದಾರೆ. ಅತ್ತ ಸುದೀಪ್ ಚಿತ್ರದ ತಯಾರಿ ನಡೆಯುತ್ತಿರೋವಾಗಲೇ ಇತ್ತ ದರ್ಶನ್ ಸುದೀಪ್ ಅವರಿಗಿಂತ ಮೊದಲೇ ಮದಕರಿಯಾಗಿ ಆರ್ಭಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ವಿಚಾರವೇನಂದ್ರೆ ಸುದೀಪ್ ಚಿತ್ರಕ್ಕಿಂತಲೂ ಮೊದಲೇ ದರ್ಶನ್ ಚಿತ್ರ ಶುರುವಾಗಲಿದೆ. ಇಂಥಾದ್ದೊಂದು ವಿಚಾರ ಅಧಿಕೃತವೆಂಬಂತೆಯೇ ಹೊರ ಬಿದ್ದಿದೆ. ಈ ಬಗ್ಗೆ ದರ್ಶನ್ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನ ಆಧಾರದಲ್ಲಿ ಹೇಳೋದಾದರೆ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಸಂಪೂರ್ಣವಾಗಿದೆ. ಇನ್ನೇನು ಒಂದೂವರೆ ತಿಂಗಳಲ್ಲಿಯೇ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

ಈ ಚಿತ್ರಕ್ಕೆ ಹಂಸಲೇಖಾ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಅವರು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದಾರೆ. ಆ ಬಳಿಕ ಚಿತ್ರಕ್ಕಾಗಿ ಅದ್ಧೂರಿ ಸೆಟ್‍ಗಳನ್ನು ಹಾಕಲು ರಾಕ್ ಲೈನ್ ವೆಂಕಟೇಶ್ ಅವರು ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಚಿತ್ರಕ್ಕಿಂತಲೂ ವೇಗವಾದ ಕೆಲಸ ಕಾರ್ಯಗಳು ದರ್ಶನ್ ಚಿತ್ರಕ್ಕಾಗಿ ಚಾಲ್ತಿಯಲ್ಲಿವೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *