ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

Public TV
1 Min Read

ಮೈಸೂರು: ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅವರ ಲೇಟೆಸ್ಟು ಸ್ಟೈಲ್ ಗೆ ಕೆಲವ್ರು ಫಿದಾ ಆದ್ರೇ ಇನ್ನು ಕೆಲವ್ರು ಇರಿಸುಮುರಿಸು ಅನುಭವಿಸಿದ್ರು.

ಸಂಭ್ರಮದ ದರ್ಬಾರ್ ನಲ್ಲಿ ಫುಲ್ ರೌಂಡ್ ಹೊಡೆಯುತ್ತಿರುವ ಜಮೀರ್ ಸಾಹೇಬ್ರಿಗೆ ಏನು ಹೊಸ ಐಡಿಯಾ ಹೊಡೆಯಿತೋ ಗೊತ್ತಿಲ್ಲ. ಸ್ಕೌಡ್ಸ್ ಅಂಡ್ ಗೈಡ್ ಗ್ರೌಂಡ್ ನಲ್ಲಿ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಸಾಹೇಬ್ರು ಊಟಕ್ಕೆ ಕೂತ್ರು.

ಮೈಸೂರು ಊಟ ಗಡದ್ದಾಗಿ ತಿಂದು ತೇಗೋದು ಬಿಟ್ಟು ಗ್ಯಾಪ್ ನಲ್ಲಿ ಹೊಸ ವಿವಾದ ಮಾಡ್ಕೊಂಡ್ರು. ಊಟದ ಕೊನೆಯಲ್ಲಿ ಅನ್ನ ಮಿಕ್ಕಿತ್ತೋ ಅಥ್ವಾ ಪೊಲೀಸರ ಮೇಲೆ ಹೆವಿ ಪ್ರೀತಿ ಉಕ್ಕಿ ಹರಿಯಿತೋ ಗೊತ್ತಿಲ್ಲ. ಇಧರ್ ಆವೋ ಅಂತಾ ಖಾಕಿಯವರನ್ನು ಕರೆದ್ರು. ಮಿನಿಸ್ಟ್ರು ಕರೆಯುತ್ತಾರೆ ಅಂತಾ ಓಡೋಡಿ ಬಂದ ಪೊಲೀಸ್ ಪೇದೆಗಳಿಗೆ ಬಾಯಿ ಹಾ ಅನ್ನು ಅಂತಾ ಹೇಳಿ ಅನ್ನ ಕಲಸಿ ಹಂಗಂಗೆ ತುರುಕಿದ್ರು. ಅದು ಮೂರು ಜನ್ರಿಗೂ ಎಂಜಲೆಲೆ ಊಟ ನಾ ಬಾಯಿಗೆ ತುರುಕಿದ್ರು.

ಇತ್ತ ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದ್ರು. ಇದು ಮಿನಿಸ್ಟ್ರ ಸಿಂಪ್ಲಿಸಿಟಿ ಅಂತಾ ಅಂದ್ ಕೊಂಡ್ರು. ಈಗ ಈ ರೀತಿ ಎಂಜಲೆಲೆ ಊಟ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *