ಕನ್ನಡ ಚಿತ್ರದ ಬಗ್ಗೆ ಬಾಲಿವುಡ್ ನಟನ ಜೊತೆ ಮಾತನಾಡಿದ್ರು ಕ್ರಿಕೆಟಿಗ ಶ್ರೀಶಾಂತ್

Public TV
1 Min Read

ಮುಂಬೈ: ಭಾನುವಾರದಿಂದ ಬಿಗ್ ಬಾಸ್-12 ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಶ್ರೀಶಾಂತ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಶಾಂತ್ ಎಂಟ್ರಿ ಕೊಡುವ ಮೊದಲು ಕನ್ನಡ ಚಿತ್ರದ ಬಗ್ಗೆ ಭಾಯ್‍ಜಾನ್ ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ.

ಶ್ರೀಶಾಂತ್ ನಾನು ಸಿನಿಮಾದಲ್ಲಿ ನಟಿಸಿದ್ದೇನೆ ಎಂದರು. ಇದನ್ನು ಕೇಳಿ ಸಲ್ಮಾನ್ ಸಿನಿಮಾನಾ ಎಂದು ಆಶ್ಚರ್ಯಪಟ್ಟರು. ಈ ವೇಳೆ ಶ್ರೀಶಾಂತ್, ಹೌದು. ನಾನು ಸೌತ್ ಸಿನಿಮಾ ಕೆಂಪೇಗೌಡ-2 ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿಭಾಯಿಸಿದ್ದೇನೆ. ಹಾಗಾಗಿ ನಾನು ದಪ್ಪಗಾಗ ಬೇಕಾಯಿತ್ತು ಎಂದು ಶ್ರೀಶಾಂತ್, ಸಲ್ಮಾನ್ ಖಾನ್ ಬಳಿ ಹೇಳಿದರು.

ಸದ್ಯ ಸಲ್ಮಾನ್ ಖಾನ್ ಜೊತೆ ಶ್ರೀಶಾಂತ್ ಕೆಂಪೇಗೌಡ-2 ಚಿತ್ರದ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜಗ್ಗೇಶ್ ವಿಡಿಯೋ ಶೇರ್ ಮಾಡಿ ತಮ್ಮ ಸಹೋದರ ಕೋಮಲ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಶ್ರೀಶಾಂತ್ ಮಾತನಾಡಿದ ವಿಡಿಯೋವನ್ನು ನಟ ಜಗ್ಗೇಶ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಕೋಮಲ್ ನಟಿಸಿರುವ ಕೆಂಪೇಗೌಡ-2 ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಬಗ್ಗೆ ಸಲ್ಮಾನ್ ಖಾನ್‍ಗೆ ಬಿಗ್‍ಬಾಸ್‍ಗೆ ಆಯ್ಕೆಯಾದ ಸಂದರ್ಭದಲ್ಲಿ ಶ್ರೀಶಾಂತ್ ಸಲ್ಮಾನ್‍ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು. ನಿಮ್ಮ ಶುಭಹಾರೈಕೆ ಇರಲಿ ಕೋಮಲ್‍ಗೆ” ಎಂದು ಟ್ವೀಟ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *