ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!

Public TV
1 Min Read

ಕೊಪ್ಪಳ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೂ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಕಿರುಕುಳ ಮಾತ್ರ ತಪ್ಪಿಲ್ಲ. ದಿನಕ್ಕೊಂದು ಕಿರುಕುಳ ಪ್ರಕರಣ ಬೆಳಕಿಗೆ ಬರ್ತಿದ್ದು, ಕೊಪ್ಪಳದ ದಾಳಿಂಬೆ ಬೆಳೆಗಾರರೊಬ್ಬರು ಮನೆಯನ್ನೇ ತೊರೆದು ಹೋಗಿದ್ದಾರೆ.

ಮೂಲತಃ ಕೊಪ್ಪಳ ತಾಲೂಕಿನ ಕೊಡದಾಳ ನಿವಾಸಿಯಾಗಿರೋ ಬಸವರಾಜ್, ತಂದೆ ನಾಗಪ್ಪ ದ್ಯಾಮಣ್ಣ ಮಡಿವಾಳರ ಕಳೆದ ಏಳೆಂಟು ವರ್ಷಗಳ ಹಿಂದೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಗಾಗಿ ಆರು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು ಆದ್ರೆ ದಾಳಿಂಬೆ ಬೆಳೆಗೆ ದುಂಡಾಣು ರೋಗ ಬಿದ್ದು ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ನಾಗಪ್ಪ ದ್ಯಾಮಣ್ಣರಿಗೆ ಸಾಲ ಮರುಪಾವತಿ ಮಾಡಲಾಗಿರಲಿಲ್ಲ. ಇದೀಗ ಸಾಲ ಸುಮಾರು 12 ಲಕ್ಷದಷ್ಟಾಗಿದ್ದು, ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ಮುಂದಿನ ತಿಂಗಳು ಜಮೀನು ಹರಾಜು ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಮನನೊಂದು ಸಾಲಗಾರ ನಾಗಪ್ಪ ದ್ಯಾಮಣ್ಣ ಮಡಿವಾಳರ ಮನೆ ಬಿಟ್ಟು ಹೋಗಿದ್ದಾರೆ.

ಜಿಲ್ಲೆಯ ಸುಮಾರು ಹದಿನೈದಕ್ಕೂ ಹೆಚ್ಚು ದಾಳಿಂಬೆ ಬೆಳೆಗಾರರಿಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ನೋಟಿಸ್ ನೀಡಿದ್ದಾರಂತೆ. ದಾಳಿಂಬೆ ಬೆಳೆಗಾರರು ಸಾಲ ಮನ್ನಾಗಾಗಿ ಕಳೆದ 9 ವರ್ಷದಿಂದ ಹೋರಾಟ ಮಾಡ್ತಿದ್ರು, ಇದುವರೆಗೂ ಯಾರೊಬ್ಬರು ಸ್ಪಂದಿಸಿಲ್ಲ, ಜೊತೆಗೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರೋದರಿಂದ ರೈತರ ಗೋಳು ಹೇಳತೀರದ್ದಾಗಿದೆ ಅಂತ ದಾಳಿಂಬೆ ಬೆಳೆಗಾರರ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ಕುಮಾಸ್ವಾಮಿ ಅವರು ಸಾಲಮನ್ನಾ ಆದೇಶ ಮಾಡಿದ್ರು ರೈತರಿಗೆ ಕಿರುಕುಳ ನಿಂತಿಲ್ಲ. ಇದ್ರಿಂದ ಬೇಸತ್ತಿರೋ ರೈತರು ನಮಗಿರೋದು ಆತ್ಮಹತ್ಯೆ ಒಂದೇ ದಾರಿ ಅಂತ ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇನ್ನಾದ್ರೂ ಇತ್ತ ಗಮನ ಹರಿಸಿ ರೈತರ ಸಂಕಷ್ಟ ಬಗೆಹರಿಸ್ತಾರಾ ಕಾದು ನೋಡಬೇಕಷ್ಟೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

Share This Article
Leave a Comment

Leave a Reply

Your email address will not be published. Required fields are marked *