ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ

Public TV
1 Min Read

ಯಾದಗಿರಿ: ಖಾಕಿ ಬಟ್ಟೆ ಧರಿಸಿ ಕೈಯಲ್ಲಿ ಲಾಠಿ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಖಾಕಿ ಪಡೆ ಇಂದು ಪೊರಕೆ ಹಿಡಿದು ಸ್ವಚ್ಛತಾ ಕಾಳಜಿ ಮೆರೆದಿದ್ದಾರೆ.

ಹೌದು, ಯಾದಗಿರಿ ನಗರದ ವಿವಿಧೆಡೆ ಪೊಲೀಸರು ಕೈಯಲ್ಲಿ ಪೊರಕೆ ಹಿಡಿದು ಚರಂಡಿ, ರಸ್ತೆ ಮೇಲಿದ್ದ ರಾಶಿ ರಾಶಿ ಕಸವನ್ನು ತೆಗೆದು ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಅಷ್ಟೇ ಅಲ್ಲದೇ ನಗರದ ಜನರಿಗೆ, ಸ್ವಚ್ಛತೆ ಕಾಳಜಿ ಪ್ರತಿಯೊಬ್ಬರು ತೊರಬೇಕು, ಪ್ರತಿಯೊಬ್ಬರು ಸ್ವಚ್ಛತಾ ಕಾಳಜಿ ವಹಿಸಿದರೆ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಸಂದೇಶ ಸಾರಿದರು.

ನಿತ್ಯವು ಆರೋಪಿಗಳನ್ನು ಹುಡುಕುವುದು, ಭದ್ರತೆಗೆಂದು ಲಾಠಿ ಹಿಡಿದುಕೊಂಡು ಖಾಕಿ ಪಡೆಗಳು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇಂದು ಕರ್ತವ್ಯದ ಜಂಜಾಟ ಬಿಟ್ಟು ಪೊಲೀಸರು ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ಚರಂಡಿ ಸ್ವಚ್ಛತೆ ಮಾಡಿದರು. ಯಾದಗಿರಿಯ ಎಸ್‍ಪಿ ಯಡಾ ಮಾರ್ಟಿನ್ ನೇತೃತ್ವದಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಯಾದಗಿರಿ ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು ಕೂಡ ಖಾಕಿ ಪಡೆಗಳ ಜೊತೆ ಕೈಜೋಡಿಸಿದರು. ನಗರದ ಸುಭಾಷ್ ವೃತ್ತ, ಚಿತ್ತಾಪುರ ರಸ್ತೆ, ಹಳೆ ಬಸ್ ನಿಲ್ದಾಣ ಹಾಗೂ ಮೊದಲಾದ ಕಡೆ ಸ್ವಚ್ಛ ಮಾಡಿದರು. ಖುದ್ದು ಎಸ್ಪಿ ಯಡಾ ಮಾರ್ಟಿನ್ ಅವರು ಚರಂಡಿ ಹಾಗೂ ರಸ್ತೆ ಬದಿ ಇದ್ದ ತ್ಯಾಜ್ಯವನ್ನು ಕೈಯಿಂದ ತೆಗೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *