ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

Public TV
1 Min Read

ನವದೆಹಲಿ: ಕೇರಳ ಸಂತ್ರಸ್ತರಿಗೆ ಯುಎಇ ಸರ್ಕಾರ ಘೋಷಿಸಿದ್ದ 700 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರದ ನೀತಿ ಅಡ್ಡಿಯಾಗಲಿದೆ ಎಂದು ವರದಿಯಾಗಿದೆ.

ವಿದೇಶಗಳಿಂದ ಸಾಲ ರೂಪದಲ್ಲಿ ಮಾತ್ರವೇ ಭಾರತ ಹಣವನ್ನು ಪಡೆಯಲು ಸಾಧ್ಯ. ಹೊರತಾಗಿ ವಿದೇಶಗಳಿಂದ ಯಾವುದೇ ನೆರವು ಸ್ವೀಕರಿಸುವಂತಿಲ್ಲ ಎನ್ನುವ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹೀಗಾಗಿ ಈ ಆರ್ಥಿಕ ನೆರವು ಸಿಗುವುದಿಲ್ಲ ಎಂದು ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಸುನಾಮಿಯ ನಂತರ ಭಾರತವು ವಿದೇಶದಿಂದ ನೆರವು ಸ್ವೀಕರಿಸುವುದನ್ನು ನಿಲ್ಲಿಸಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜಲಪ್ರಳಯ ಉಂಟಾದಾಗ ವಿದೇಶಗಳಿಂದ ಪರಿಹಾರ ನಿಧಿ ಹರಿದುಬಂದಿತ್ತು. ಆದರೆ ಅಂದಿನ ವಿತ್ತ ಸಚಿವ ಪಿ.ಚಿದಂಬರಂ ವಿಶ್ವ ಬ್ಯಾಂಕಿನಿಂದ ಸಾಲ ಪಡೆದರೂ, ವಿದೇಶಗಳಿಂದ ಪರಿಹಾರ ನಿಧಿ ಪಡೆಯುವುದಿಲ್ಲ ಎಂದು ಹೇಳಿದ್ದರು. ಇದನ್ನು ಓದಿ: ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿಶ್ವಸಂಸ್ಥೆ, ರಷ್ಯಾ, ಚೀನಾ ಸೇರಿದಂತೆ ಅನೇಕ ದೇಶಗಳಿಂದ ನೆರವು ಹರಿದು ಬಂದಿತ್ತು. ಆದರೆ ಇದ್ಯಾವುದನ್ನೂ ಅಂದಿನ ಸರ್ಕಾರ ಸ್ವೀಕರಿಸಿಲ್ಲ. ಇದು ಈಗ ಕೇರಳ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *