ಕೇರಳ ನೆರೆಯಲ್ಲೊಂದು ಬೆಳಕಿಗೆ ಬಂತು ಮನ ಕಲಕುವ ಆತ್ಮಹತ್ಯೆ!

Public TV
1 Min Read

ತಿರುವನಂತಪುರಂ: 12ನೇ ತರಗತಿ ಪ್ರಮಾಣ ಪತ್ರಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಅರಗಿಸಲಾಗದೇ ಕೇರಳದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೋಯಿಕ್ಕೋಡು ಜಿಲ್ಲೆಯ ಕರಂತೂರ್ ಗ್ರಾಮದ ಕೈಲಾಶ್(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. 12ನೇ ತರಗತಿ ಮುಗಿಸಿದ್ದ ಕೈಲಾಶ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆಗಿದ್ದು ಏನು?
ಐಟಿಐ ಓದಲು ಪ್ರವೇಶ ಪಡೆದಿದ್ದ ಕೈಲಾಶ್ ಈ ಸಂಬಂಧ ಹೊಸ ಬಟ್ಟೆ ಮತ್ತು ಹಣವನ್ನು ಸಂಗ್ರಹಿಸಿದ್ದ. ಈ ಸಂದರ್ಭದಲ್ಲಿ ಭಾರೀ ನೆರೆ ಬಂದ ಕಾರಣ ಕೈಲಾಶ್ ಕುಟುಂಬ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಮಳೆ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಕೈಲಾಶ್ ಕುಟುಂಬ ಭಾನುವಾರ ಮನೆಗೆ ಮರಳಿತ್ತು. ಮನೆಗೆ ಹೋದ ಕೂಡಲೇ ಕೈಲಾಶ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಹುಡುಕಿದ್ದಾನೆ.

ಎಷ್ಟು ಹುಡುಕಿದರೂ ಶೈಕ್ಷಣಿಕ ದಾಖಲೆಗಳು ಸಿಗದೇ ಇದ್ದಾಗ ಕೈಲಾಶ್ ಮನನೊಂದಿದ್ದ. ಬಳಿಕ ಮನೆಯ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ. ತಾಯಿ ಮನೆಯನ್ನು ಸ್ವಚ್ಛಗೊಳಿಸಲು ಕೊಠಡಿ ತೆರೆದಾಗ ಕೈಲಾಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *