ಅಜಾತಶತ್ರು ವಾಜಪೇಯಿ ಹೆಸರಿನ ಗುಟ್ಟು ನಿಮಗೊತ್ತಾ?

Public TV
1 Min Read

ಭಾರತದ ಧೀಮಂತ, ಸತ್ಯ, ನಿಷ್ಠೆ, ಪ್ರಾಮಾಣಿಕ, ಜನಪರ ಕಾಳಜಿ ಹೊಂದಿದ ಶ್ರೇಷ್ಠ ವ್ಯಕ್ತಿತ್ವದ, ದೇಶದ ಕಂಡ ಅಪರೂಪದ ಪ್ರಧಾನ ಮಂತ್ರಿಯಾಗಿದ್ದರು ಅಟಲ್ ಬಿಹಾರಿ ವಾಜಪೇಯಿ.

ಪ್ರಚಂಡವಾದ ಭಾರತ ಪ್ರೀತಿ, ಕೋಟಿ ಕೋಟಿ ಜನರ ನರನಾಡಿಗಳನ್ನು ಅಲುಗಾಡಿಸುವಂತಹ ಮಿಂಚಿನಂತಹ ಮಾತುಗಳು, ಉನ್ನತ ಹಾಗೂ ಉದಾತ್ತ ಧ್ಯೇಯ್ಯಳಿಂದ ಆರು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಅಜಾತ ಶತ್ರುವಾಗಿ, ಸವ್ಯಸಾಚಿಯಾಗಿ ವಿಜೃಂಭಿಸಿದ ಮಹಾನ್ ಶಕ್ತಿ ಅಟಲ್ ಬಿಹಾರಿ ವಾಜಪೇಯಿ.

ಅವರ ತಾತ ಬಟೇಶ್ವರದವರು. ಅಟಲ್ ಜೀ ಅವರ ಪೂರ್ವಜರಾದ ಮಣೀರಾಮಜೀ ಇಲ್ಲಿ ವಾಜಪೇಯಿ ಯಜ್ಞವನ್ನು ಮಾಡಿಸಿದರಾಗಿ ಆ ವಂಶಸ್ಥರಿಗೆ ವಾಜಪೇಯಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ.

ಬಟೇಶ್ವರ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಬಾಹತಹ ಸೋಲಿನಲ್ಲಿ ಯಮುನಾ ನದಿಯ ತೀರದ ಒಂದು ಗ್ರಾಮ. ಇದು ಆಗ್ರಾಗೆ 70 ಕಿಮೀ ದೂರದಲ್ಲಿದೆ. ಈ ಗ್ರಾಮ ಹಿಂದಿನಿಂದಲೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯದ ಚಟುವಟಿಕೆಗಳ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಬಟೇಶ್ವರ ಮಹಾದೇವನ ದೇವಸ್ಥಾನವಿದೆ.

(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ಯಥಾವತ್ ವಿವರ)

https://youtu.be/gopOVPqsjmU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *