ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ ರೇವಣ್ಣ!

Public TV
1 Min Read

ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಾಸ್ತು ನಂಬಿಕೆ ಅತಿಯಾಗಿ ಮುಂದುವರಿದಿದ್ದು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ್ದಾರೆ.

ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಆದರೆ ಅರ್ಚಕರು ಸಿಎಂ ಕುಮಾರಸ್ವಾಮಿ ದಂಪತಿಗೆ ಹೇಳಿದ್ದ ಪ್ರದಕ್ಷಿಣೆ ದಿಕ್ಕನ್ನು ಸಚಿವ ರೇವಣ್ಣ ವಾಸ್ತು ಪ್ರಕಾರ ದಿಕ್ಕು ಬದಲಾಗಬೇಕು ಎಂದು ಹೇಳಿದ್ದರು. ಬಳಿಕ ರೇವಣ್ಣ ಹೇಳಿದಂತೆಯೇ ಕುಮಾರಸ್ವಾಮಿ ದಂಪತಿ ಪ್ರದಕ್ಷಿಣೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಪೂಜೆ ಹೇಗೆ ಮಾಡಬೇಕು ಅಂತಾ ಅರ್ಚಕರಿಗೂ ಪೂಜೆ ಪಾಠ ಮಾಡಿದ್ದಾರೆ.

ಈ ಮಧ್ಯೆ, ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಇತ್ತ ಕುಮಾರಸ್ವಾಮಿಯವರು ಅಗತ್ಯಬಿದ್ದರೆ ಪ್ರಜ್ವಲ್ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

https://youtu.be/tsooli2UbGo

ಈ ಹಿಂದೆಯೂ ಹಾಸನದ ಜಿಲ್ಲಾಸ್ಪತ್ರೆ ಸಮೀಪದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಶಂಕು ಸ್ಥಾಪನೆಗೆ ಸಚಿವ ರೇವಣ್ಣ ಆಗಮಿಸಿದ್ದರು. ಈ ವೇಳೆ ಪ್ರಾರಂಭವಾಗಿದ್ದ ಪೂಜೆ ತಡೆದು, ದಿಕ್ಕು ಬದಲಿಸುವಂತೆ ಅರ್ಚಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಸ್ತು ಪ್ರಕಾರ ನೀವು ಪೂಜೆ ಮಾಡುತ್ತಿಲ್ಲ ಎಂದು, ತಾವೇ ಮುಂದೆ ನಿಂತು ಪೂಜೆ ಮಾಡಿಸಲು ಮುಂದಾದ ಸಚಿವರು, “ರೀ ನೀರು ಮೊದಲು ಹಾಕಿ, ನೀವು ನಮ್ಮ ತಲೆ ಬಿಸಿ ಮಾಡಬೇಡಿ” ಎಂದು ಅರ್ಚಕ ರವಿ ಅವರ ವಿರುದ್ಧ ರೇಗಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *