ಬೀಟ್ ಪೊಲೀಸರ ರೌಂಡ್ಸ್ ನಿಂದ ತಪ್ಪಿತು ಎಟಿಎಂ ದರೋಡೆ

Public TV
1 Min Read

ಬೆಂಗಳೂರು: ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಎಟಿಎಂಗೆ ಕನ್ನ ಹಾಕಿ ಹಣ ದರೋಡೆಗೆ ಬಂದಿದ್ದ ಖದೀಮರು, ಎಟಿಎಂ ಮೆಷಿನ್ ಧ್ವಂಸ ಮಾಡಿದ್ದಾರೆ.

ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ಸೊಂಡೆಕುಪ್ಪ ಬೈಪಾಸ್ ಬಳಿ ನಡೆದಿದೆ. ಕೆನರಾ ಬ್ಯಾಂಕ್‍ ಗೆ ಸೇರಿದ ಎಟಿಎಂನಲ್ಲಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ, ಎಟಿಎಂ ಮೆಷಿನ್ ಅನ್ನು ಸಂಪೂರ್ಣ ದ್ವಂಸಗೊಳಿಸಿದ್ದಾರೆ. ದರೋಡೆ ವೇಳೆ ಪೊಲೀಸರು ಬೀಟ್‍ ನಲ್ಲಿ ಇದ್ದಿರುವುದನ್ನು ಗಮನಿಸಿದ ನಾಲ್ಕು ಜನ ದುಷ್ಕರ್ಮಿಗಳ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸದ್ಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *