ಸುತ್ತೂರು ಸ್ವಾಮೀಜಿ ಬಹಳ ಸುಂದರವಾಗಿದ್ದಾರೆ: ಅಶೋಕ್ ಖೇಣಿ

Public TV
1 Min Read

-ನನ್ನ ಮಕ್ಕಳಿಗೆ ಅವಳಿ ಹೆಣ್ಣು ಹುಡುಕಿ ಕೊಡಿ

ಮೈಸೂರು: ಸುತ್ತೂರು ಶ್ರೀಗಳನ್ನು ಹೊಗಳುವ ಭರದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಸ್ವಾಮೀಜಿಗಳಿಗೆ ಮುಜುಗುರು ಉಂಟು ಮಾಡಿದ್ದಾರೆ.

ಸುತ್ತೂರು ಮಠದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ್ ಖೇಣಿ, ನನಗೆ ಮೈಸೂರಿಗೆ ಬಂದಾಗ ತವರು ಮನೆಗೆ ಬಂದ ಅನುಭವ ಉಂಟಾಗುತ್ತದೆ. ನನ್ನ ಪತ್ನಿ ಯಾವಗಲೂ ಸ್ವಾಮೀಜಿಗಳ ಕಣ್ಣುಗಳ ಬಗ್ಗೆ ಹೊಗಳುತ್ತಾರೆ. ಸ್ವಾಮೀಜಿಗಳ ಅರ್ಥ ಗರ್ಭಿತ ಮಾತು, ದಿವ್ಯ ದೃಷ್ಟಿ ಎಲ್ಲವೂ ಅದ್ಭುತ. ಮುಂದೆ ನನ್ನ ಮಕ್ಕಳ ಮದುವೆಯನ್ನು ಸುತ್ತೂರು ಮಠದಲ್ಲೇ ಸ್ವಾಮೀಜಿಗಳ ಸಮ್ಮುಖದಲ್ಲೇ ಮಾಡುತ್ತೇನೆ ಎಂದರು.

ನನ್ನ ಮಕ್ಕಳಿಗೆ 25 ವರ್ಷ ಆಗಿದ್ದು, ಮದುವೆ ಮಾಡಬೇಕಿದೆ. ನನ್ನಿಬ್ಬರು ಗಂಡು ಮಕ್ಕಳಿಗೆ ಅವಳಿ-ಜವಳಿ ಹೆಣ್ಣು ಮಕ್ಕಳನ್ನು ಹುಡುಕಿ ಕೊಡಿ. ಹುಡುಗಿ ಲಿಂಗಾಯತರಾಗಿರಬೇಕು, ಸುಂದರವಾಗಿರಬೇಕು. ನಮ್ಮೆಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಎಂದು ಸ್ವಾಮೀಜಿಗಳಿಗೆ ತಮ್ಮ ಮಕ್ಕಳಿಗೆ ಹೆಣ್ಣು ಹುಡುಕುವ ಜವಾಬ್ದಾರಿ ಅಶೋಕ್ ಖೇಣಿ ನೀಡಿದರು.

ಉದ್ಯಮ, ರಾಜಕಾರಣ ಎಲ್ಲವೂ ಆಯಿತು. ನನ್ನನ್ನು ನಿಮ್ಮ ಮಠಕ್ಕೆ ಸೇರಿಸಿಕೊಳ್ಳಿ ಅಥವಾ ನನಗೊಂದು ಬೇರೆ ಮಠ ಮಾಡಿಕೊಡಿ ಎಂದು ನಾನು ಸ್ವಾಮೀಜಿಗಳ ಬಳಿ ಕೇಳಿಕೊಂಡಿದ್ದೇನೆ. ಆದ್ರೆ ಸ್ವಾಮೀಜಿಗಳು ಒಪ್ಪುತ್ತಿಲ್ಲ. ನಿಮ್ಮ ಪತ್ನಿಯಿಂದ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳ್ತಾರೆ. ನಾನೇನು ಮಾಡಲಿ ಎಂದು ಆಶೋಕ್ ಖೇಣಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *