ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

Public TV
1 Min Read

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಗೀಕಹಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದೆ.

ಗೀಕಹಳ್ಳಿ ಗ್ರಾಮದ ಮಹದೇವ್ ಎಂಬವರ ಕುಟುಂಬಕ್ಕೆ ಇಂತಹ ದುಃಸ್ಥಿತಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದ ಮುಖಂಡರ ಆಕ್ರೋಶಕ್ಕೆ ಸಿಲುಕಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಮಹದೇವ್, ಬಿಳಿಗೆರೆ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ.

ಐದು ವರ್ಷದ ಹಿಂದೆ ಗ್ರಾಮದ ಮುಖಂಡರ ಜೊತೆ ಜಾಗ ಖರೀದಿ ವಿಚಾರದಲ್ಲಿ ಮಹದೇವ ಜಗಳ ಮಾಡಿಕೊಂಡಿದ್ದರು. ಈ ವಿಚಾರ ಮುಂದಿಟ್ಟುಕೊಂಡ ಗ್ರಾಮದ ಇನ್ನಿತರ ಮುಖಂಡರು ಮಹದೇವ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ರು. ಬಹಿಷ್ಕಾರದ ಎಫೆಕ್ಟ್ ಇವರ ಮಗಳ ಕುಟುಂಬದ ಮೇಲೂ ಬೀರಿದೆ. ಅಳಿಯ ಮಗಳನ್ನು ಇದೇ ಕಾರಣಕ್ಕೆ ಬಿಟ್ಟು ಹೋಗಿದ್ದಾನೆ. ಹಬ್ಬಗಳಲ್ಲಿ ಭಾಗವಹಿಸುವಂತಿಲ್ಲ, ಅಂಗಡಿಗಳಲ್ಲಿ ಪದಾರ್ಥ ಕೊಂಡುಕೊಳ್ಳುವಂತಿಲ್ಲ, ಮತ್ತೊಬ್ಬರ ಮನೆಯಲ್ಲಿ ನೀರೂ ಕುಡಿಯುವಂತಿಲ್ಲ ಇಂತಹ ಪರಿಸ್ಥಿತಿ ಮಹದೇವ್ ಅವರ ಕುಟುಂಬಕ್ಕೆ ಬಂದಿದೆ. ಗ್ರಾಮದ ಹೊರವಲಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಹದೇವನ ಕುಟುಂಬಕ್ಕೆ ಸದ್ಯ ಜೀವ ಭಯ ಉಂಟಾಗಿದೆ.

Share This Article
Leave a Comment

Leave a Reply

Your email address will not be published. Required fields are marked *