ಸ್ಯಾಂಡಲ್‍ವುಡ್ ನಟ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತೆ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟ ಧಮೇಂದ್ರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಕುಡಿಸಿ, ಆಕೆಯ ಜೊತೆಯಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಧರ್ಮೇಂದ್ರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

ಧರ್ಮೇಂದ್ರ ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯನ್ನು ಕರೆಸಿಕೊಂಡಿದ್ದ. ಬಳಿಕ ಧರ್ಮೇಂದ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್‍ಗೆ ಕರೆಸಿಕೊಂಡನು. ಆರ್.ಆರ್ ನಗರದ ಹೋಟೆಲ್‍ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡನು. ಊಟದ ಬಳಿಕ ಧರ್ಮೇಂದ್ರ ಕೂಲ್‍ಡ್ರಿಕ್ಸ್ ನಲ್ಲಿ ಮತ್ತು ಬರೋ ಔಷಧಿ ಕುಡಿಸಿದ್ದಾನೆ. ಮಹಿಳೆಯೊಂದಿಗಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿಮ್ಮ ಕುಟುಂಬಕ್ಕೆ ಈ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?
ಚಿತ್ರನಟ ಧರ್ಮೇಂದ್ರ ಅಲಿಯಾಸ್ ಧರ್ಮ ನನಗೆ ಪರಿಚಯ. ನಂತರ ರಾಜರಾಜೇಶ್ವರಿ ನಗರದಲ್ಲಿ ಶೂಟಂಗ್ ಇದೆ ಬನ್ನಿ ಎಂದು ಧಮೇಂದ್ರ ಚಾಲಕ ನವೀನ್ ಮೂಲಕ ಕಾರಿನಲ್ಲಿ ನನನ್ನು ಕರೆಸಿಕೊಂಡನು. ಬಳಿಕ ನಾನು ಶೂಟಿಂಗ್ ಎಲ್ಲಿ ನಡೆಯುತ್ತಿದೆ ಎಂದು ಕೇಳಿದ್ದಾಗ ಆಗ ಧರ್ಮೇಂದ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟ ಮಾಡಿಸಿ ಕೂಲ್ ಡ್ರಿಂಕ್ಸ್ ನೀಡಿದ್ದರು. ಕೂಲ್ ಡ್ರಿಂಕ್ಸ್ ಕುಡಿದ ನಂತರ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿ ಶೂಟಿಂಗ್ ರೂಮಿನಲ್ಲಿ ಒಬ್ಬಳೇ ಇದೆ.

ನಂತರ ಧರ್ಮೇಂದ್ರ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟನು. ನನ್ನ ಬಳಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ನಿನ್ನ ಕುಟುಂಬಸ್ಥರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟನು. ಸುಮಾರು 14 ಲಕ್ಷ ಹಣವನ್ನು ನನ್ನಿಂದ ಸುಲಿಗೆ ಮಾಡಿದ್ದಾನೆ. ಬಳಿಕ ಸದರಿ ಹಣವನ್ನು ನನ್ನ ಪತಿ ವಾಪಾಸ್ ಕೇಳಿದ್ದಾಗ ಧರ್ಮೇಂದ್ರ ಮನೆ ಬಳಿ ಬಂದು ನನ್ನ ಹಾಗೂ ನನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಚಿತ್ರನಟ ಧರ್ಮೇಂದ್ರ ಹಾಗೂ ಆತನ ಕಾರು ಚಾಲಕ ನವೀನ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *