ನೀರು ಬದಲು ಹಾಲು ಬಳಸಿ ಸ್ನಾನ – ವಿನೂತನ ಪ್ರತಿಭಟನೆಗಿಳಿದ ಹೈನುಗಾರರು

Public TV
1 Min Read

ಬೆಳಗಾವಿ: ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಸ್ನಾನಕ್ಕೆ ಹಾಲನ್ನು ಬಳಸಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಚಿಕ್ಕೋಡಿ ಸಮೀಪದ ಮಹಾರಾಷ್ಟ್ರದ ಕಾಗಲ ಗ್ರಾಮದಲ್ಲಿ ಕಡಿಮೆ ದರದ ಹಿನ್ನೆಲೆಯಲ್ಲಿ ಉತ್ಪಾದಕರು ಹಾಲನ್ನು ಸರಬರಾಜು ಮಾಡುತ್ತಿಲ್ಲ. ಬದಲಾಗಿ ಮನೆಯಲ್ಲಿ ಹಾಲನ್ನು ಬಕೆಟ್ ನಲ್ಲಿ ಸಂಗ್ರಹ ಮಾಡಿ ಸ್ನಾನ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರತಿಭಟನೆಯಲ್ಲಿ ವೇಳೆ ರೈತರು ಹಾಲಿನ ದರ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕದಿಂದ ಸರಬರಾಜು ಮಾಡುತ್ತಿದ್ದ ಕೆಎಂಎಫ್ ವಾಹನಗಳನ್ನ ತಡೆದು ಹಾಲನ್ನು ರಸ್ತೆಗೆ ಚೆಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *