ರಾಮಮಂದಿರ ನಿರ್ಮಾಣಕ್ಕೆ ಈಗಾಗ್ಲೇ ಅಡಿಪಾಯ ಹಾಕಲಾಗಿದೆ: ಬೆಳ್ಳುಬ್ಬಿಗೆ ಪೇಜಾವರ ಶ್ರೀ ಟಾಂಗ್

Public TV
1 Min Read

ಬಾಗಲಕೋಟೆ: ದಲಿತ ವ್ಯಕ್ತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಹೇಳುವ ಮೂಲಕ ಪೇಜಾವರ ಶ್ರೀಗಳು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಮಮಂದಿರಕ್ಕೆ ಪಾಯ ಹಾಕಲಾಗಿದ್ದು, ಮಂದಿರದ ಕಟ್ಟಡ ಕಾರ್ಯ ಪೂರ್ಣವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಅವುಗಳನ್ನು ತಂದು ಜೋಡಿಸುವುದು ಅಷ್ಟೇ ಬಾಕಿ ಇದೆ ಎಂದು ಹೇಳಿದರು. ಇದನ್ನು ಓದಿ: ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

ಮಾಜಿ ಸಿಎಂ ಸಿದ್ದರಾಮಯ್ಯ ಅವರೊಬ್ಬರೇ ಅಲ್ಲ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಕೃಷ್ಣ ಮಠಕ್ಕೆ ಬಂದಿದ್ದಾರೆ. ಅವರು ಮಠದ ಭಕ್ತರು ಎಂದು ಪ್ರತಿಕ್ರಿಯೆ ನೀಡಿದರು.

ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕೇಳಿರುವೆ. ರಾಜ್ಯದಲ್ಲಿ ತಾರತಮ್ಯ ಸಲ್ಲದು, ಇದನ್ನು ಸರಿ ಮಾಡಬೇಕೇ ಹೊರತು ಪ್ರತ್ಯೇಕ ರಾಜ್ಯಕ್ಕೆ ಮುಂದಾಗಬಾರದು. ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗಿಗೆ ಹಾಗೂ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮಕ್ಕೆ ನನ್ನ ಬೆಂಬಲವಿಲ್ಲ ಎಂದು ಸ್ಪಷ್ಟನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *