ಬಾಡಿಗೆ ಆಸೆಗೆ ಹೆತ್ತವರನ್ನೇ ಹೊರಹಾಕಿದ ಮಗ- ಮನೆಯಲ್ಲಿದ್ದ ವಸ್ತುಗಳ ಧ್ವಂಸ

Public TV
1 Min Read

ಹಾಸನ: ಬಾಡಿಗೆ ಹಣದ ಆಸೆಗೆ ಮಗನೇ ತಂದೆ-ತಾಯಿಯನ್ನು ಮನೆ ಖಾಲಿ ಮಾಡುವಂತೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸಗೊಳಸಿರುವ ಘಟನೆ ಹಾಸದಲ್ಲಿ ನಡೆದಿದೆ.

ನಗರದ ವಲ್ಲಭಾಯಿ ರಸ್ತೆಯ ನಿವಾಸಿಗಳಾದ ಕೃಷ್ಣಪ್ಪ ಮತ್ತು ಗಂಗಮ್ಮ ಹಲ್ಲೆಗೊಳಗಾಗಿರುವ ವೃದ್ಧ ದಂಪತಿ. ಕೃಷ್ಣಪ್ಪ ಮತ್ತು ಗಂಗಮ್ಮ ತಮ್ಮ ಇಬ್ಬರು ಮಕ್ಕಳಿಗೂ ಒಂದೊಂದು ಮನೆಯನ್ನು ನೀಡಿ ತಾವು ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು.

ಹಿರಿಯ ಮಗ ನಾಗೇಶ್ ಮನೆಯನ್ನು ಬಾಡಿಗೆಗೆ ನೀಡಿದ್ರೆ ಒಂದಿಷ್ಟು ಹಣ ಸಿಗುತ್ತೆ ಎಂಬ ದುರಾಸೆಯಿಂದ ತಂದೆ-ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೆಳಿಸಿ ಕಿರುಕುಳ ನೀಡಿದ್ದಾನೆ. ದಿನನಿತ್ಯ ಕುಡಿದು ಬಂದು ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಮಗನಿಂದ ನಮಗೆ ರಕ್ಷಣೆ ನೀಡಿ ಎಂದು ವೃದ್ಧ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *