ಸ್ಮಶಾನದಲ್ಲಿ ಜಾಗರಣೆ ಮಾಡಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದೆ: ನಾಗಾ ಸಾಧು

Public TV
1 Min Read

ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಜಾಗರಣೆ ಮಾಡಿದ್ದರಿಂದಲೇ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹರಿದ್ವಾರದ ನಾಗಾ ಸಾಧುಗಳು ಹೇಳಿದ್ದಾರೆ.

ಉತ್ತರ ಭಾರತದ ಪ್ರವಾಸದಲ್ಲಿರುವ ನಾಗಾ ಸಾಧುಗಳು ಬೆಳಗಾವಿಯ ಭಕ್ತರೊಬ್ಬರ ಮನೆಗೆ ಆಗಮಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ಮಶಾನದಲ್ಲಿ ಸಿದ್ಧಿ ಮಾಡುವಾಗ ವ್ಯತಿರಿಕ್ತ ಪರಿಣಾಮಗಳು ಆಗುತ್ತದೆ. ಸದ್ಯ ಆ ಪರಿಣಾಮ ಸತೀಶ್ ಜಾರಕಿಹೊಳಿ ಅವರಿಗೆ ಉಂಟಾಗಿದ್ದು, ಅದನ್ನು ಎದುರಿಸುತ್ತಿದ್ದಾರೆ ಎಂದು ನುಡಿದರು.

ರಾಜ್ಯದಲ್ಲಿ ಸಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃದ ಸರ್ಕಾರ 5 ವರ್ಷದ ಆಳ್ವಿಕೆ ಮಾಡಲಿದೆ ಎಂದು ನಾಥ ಪಂತಿಯ ಸಾಧುಗಳು ಭವಿಷ್ಯ ನುಡಿದರು.

ಕಳೆದ ವರ್ಷ ಡಿಸೆಂಬರ್ 6ರಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೂಢನಂಬಿಕೆ ವಿರೋಧಿ ಪರಿವರ್ತನಾ ಜಾಥಾ ಆಯೋಜಿಸಿದ್ದರು. ಅಲ್ಲದೇ ಅಂದು ಬೆಳಗಾವಿಯ ಸ್ಮಶಾನದಲ್ಲಿ ಜಾಗರಣೆ ಹಮ್ಮಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *