ಕಾರ್ ಕದ್ದು ಮರಕ್ಕೆ ಡಿಕ್ಕಿ ಹೊಡೆದ ಕಳ್ಳ – ಸದ್ಯ ಬಚಾವ್ ಎಂದು ಎಸ್ಕೇಪ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳ್ಳನೊಬ್ಬ ಕಾರ್ ಕದ್ದು ಪರಾರಿಯಾಗುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಗರದಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿನಗರ ಹೆಲ್ತ್ ಲೇಔಟ್ ನಲ್ಲಿ ಇದೇ ತಿಂಗಳ 23 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳ ತಡರಾತ್ರಿ ಸುಮಾರು 11 ಗಂಟೆಗೆ ಹೆಲ್ತ್ ಲೇಔಟ್ ಏರಿಯಾಗೆ ಬಂದಿದ್ದಾನೆ. ಬಳಿಕ ಆ ಏರಿಯಾದಲ್ಲಿ ಪ್ರಕಾಶ್ ಅವರು ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಏರಿಯಾಗೆ ಎಂಟ್ರಿ ಕೊಟ್ಟಿದ್ದ ಕಳ್ಳ ಕಾರ್ ನೋಡಿ ಕದಿಯಲು ಯತ್ನಿಸಿದ್ದಾನೆ.

ತದನಂತರ ಕಳ್ಳ ಕಾರ್ ಆನ್ ಮಾಡಿದ್ದಾನೆ. ಆಗ ಕಾರಿನ ಶಬ್ಧ ಕೇಳಿ ಮಾಲೀಕ ಪ್ರಕಾಶ್ ಮನೆಯಿಂದ ಹೊರಗೆ ಬಂದಿದ್ದಾರೆ. ಮಾಲೀಕ ಹೊರ ಬರುತ್ತಿದ್ದಂತೆ ಕಳ್ಳ ಗಾಬರಿಯಲ್ಲಿ ವೇಗವಾಗಿ ಕಾರನ್ನು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಹೋಗಿದ್ದಾನೆ.

ಈ ವೇಳೆ ಕಳ್ಳ ರಸ್ತೆ ಪಕ್ಕದ್ಲಲಿದ್ದ ಮರಕ್ಕೆ ಹೋಗಿ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಳ್ಳ ಪ್ರಾಣಾಪಾಯದಿಂದ ಪಾರಾದೆ ಅಂತ ಕುಂಟುತ್ತ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಕಾರ್ ಮಾಲೀಕ ಪ್ರಕಾಶ್ ಅಣ್ಣಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *