ಬಿಬಿಎಂಪಿಯಲ್ಲಿ ದುಡ್ಡಿಲ್ಲ, ಸರ್ಕಾರವೂ ಕೊಡ್ತಿಲ್ಲ- ಸಂಕಷ್ಟದಲ್ಲಿದ್ದಾರೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು!

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಗೆ ಕೊಟಿ ಕೋಟಿ ಹಣ ಬಿಡುಗಡೆಯಾಬೇಕಾಗಿದೆ. ಇದೀಗ ಬಿಬಿಎಂಪಿ ಈ ಅನುದಾನಕ್ಕೆ ಸಕಾರದ ಕಡೆ ತಿರುಗಿದೆ.

ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗೆ ಕೊಡಲು ಸರ್ಕಾರದ ಬಳಿ ಹಣ ಇಲ್ವಾ ಅನ್ನೋ ಪ್ರಶ್ನೆ ಇದೀಗ ಮೂಡಿದೆ. 198 ಕ್ಯಾಂಟೀನ್ ಗಳಿಗೆ 130 ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಅವರ ಸರ್ಕಾರ ಹೇಳಿತ್ತು. ಆದ್ರೆ 100 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಅದೂ ಕೂಡ ನಗರೋತ್ಥಾನ ನಿಧಿಯಿಂದ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಸಿದ್ದರಾಮಯ್ಯ ಸರ್ಕಾರ ಪೂರ್ತಿ ಅನುದಾನ ಕೊಡಲಿಲ್ಲ, ಮೈತ್ರಿ ಸರ್ಕಾರವೂ ಕೊಡೋ ಮನಸು ಮಾಡ್ತಿಲ್ಲ. ಹೀಗಾಗಿ ಬಿಬಿಎಂಪಿ ನೀಡಬೇಕಿದೆ ಬಾಕಿ 35 ಕೋಟಿ ರೂಪಾಯಿಯನ್ನು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ನೀಡಬೇಕಾಗಿದೆ. ಬಿಬಿಎಂಪಿಯಲ್ಲಿ ದುಡ್ಡಿಲ್ಲ, ಸರ್ಕಾರವು ಕೊಡ್ತಿಲ್ಲ. ಹೀಗಾಗಿ ಗುತ್ತಿಗೆದಾರರು ಸಂಕಷ್ಟದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ.

ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಪ್ರಶ್ನೆಗೆ ಬಿಬಿಎಂಪಿ ಬರೆದ ಪತ್ರದಲ್ಲಿ ಈ ಎಲ್ಲ ವಿಚಾರಗಳು ಬಹಿರಂಗವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *