ಉಡುಪಿ: ಜಿಲ್ಲೆಯಲ್ಲಿ ಮನೆಯೊಂದಕ್ಕೆ ನುಗ್ಗಿ 7 ಕೋಳಿ ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಿಸಲಾಗಿದೆ.
ಉಡುಪಿಯ ಹಾವಂಜೆಯ ಮನೆಯೊಂದಕ್ಕೆ ಬಂದ ನಾಗರ ಹಾವು, ಕೋಳಿಯನ್ನು ಕೊಂದು ಎಲ್ಲಾ ಏಳು ಮೊಟ್ಟೆಗಳನ್ನು ನುಂಗಿತ್ತು. ನಂತರ ಹಟ್ಟಿಯ ಮೇಲ್ಛಾವಣಿಯಲ್ಲಿ ಅಡಗಿ ಕುಳಿತಿದೆ.
ಇದರಿಂದ ಭಯಗೊಂಡ ಮನೆಯವರು ತಕ್ಷಣ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಗೆ ಕರೆಮಾಡಿದ್ದಾರೆ. ಗುರುರಾಜ್ ಕೂಡಲೇ ಹಾವಂಜೆಗೆ ಧಾವಿಸಿದ್ದು ಮೊಟ್ಟೆಯನ್ನು ನುಂಗಿದ್ದ ಹಾವನ್ನು ಸೆರೆ ಹಿಡಿದರು.
ಹಾವನ್ನು ಮೇಲ್ಛಾವಣಿಯಿಂದ ಅಂಗಳಕ್ಕಿಳಿಸಿದ್ದಾರೆ. ಬಳಿಕ ಭಯಗೊಂಡ ಆ ಹಾವು ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿದೆ. ಅಲ್ಲಿಂದ ಹೊರಟ ಹಾವನ್ನು ರಕ್ಷಿಸಿ ಅದಕ್ಕೆ ಆಹಾರ ನೀಡುವ ಮೂಲಕ ಗುರುರಾಜ್ ಸನಿಲ್ ಮಾನವೀಯತೆಯನ್ನು ಮೆರೆದಿದ್ದಾರೆ.
https://www.youtube.com/watch?v=oeQwSM–jmg&feature=youtu.be