ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು, ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಎಂ

Public TV
1 Min Read

ಬೆಂಗಳೂರು: ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ಕೊಟ್ಟಿದ್ದಾರೆ.

ಹೊಸ ಕಾರು ಖರೀದಿಗೆ ಕೋರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಚಿವರು, ಅಧಿಕಾರಿಗಳು ಸೇರಿದಂತೆ 11 ಅರ್ಜಿ ಬಂದಿದ್ದವು. ಆದರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಿಎಂ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ 11 ಅರ್ಜಿಗಳು ವಾಪಸ್ ಆಗಿದೆ.

ಮುಖ್ಯ ಕಾರ್ಯದರ್ಶಿ ಕಚೇರಿಗೆ ಆರು ಮಂದಿ ಸಚಿವರು ಮತ್ತು 5 ಮಂದಿ ಅಧಿಕಾರಿಗಳಿಂದ ಹೊಸ ಕಾರಿಗಾಗಿ ಅರ್ಜಿ ಬಂದಿದ್ದವು. ಈ ವರ್ಷ ಅನಗತ್ಯ ವೆಚ್ಚಕ್ಕಾಗಿ ಹಣ ನೀಡದಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದರು.

ಸಚಿವಾರದ ಕೆಜೆ ಜಾರ್ಜ್, ಡಿ.ಕೆ.ಶಿವಕುಮಾರ್, ಜಯಮಾಲಾ, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ್ ಮತ್ತು ಖಾದರ್ ಹೊಸ ಕಾರ್ ನೀಡುವಂತೆ ಅರ್ಜಿ ಸಲ್ಲಿಸಿದರು. ಅನುಮತಿ ಸಿಗದ ಹಿನ್ನೆಲೆಯಲ್ಲಿ ಸಚಿವರ ಕಾರು ಖರೀದಿ ಅರ್ಜಿಗಳು ವಾಪಸ್ ಮಾಡಲಾಗಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *