ಚಿಕ್ಕಬಳ್ಳಾಪುರ: 4 ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯತಮೆ ಈಗ ಮತ್ತೊಬ್ಬ ಯುವಕನ ಜೊತೆ ಪ್ರೀತಿಗೆ ಬಿದ್ದು ತನಗೆ ಮೋಸ ಮಾಡಿದ್ದಾಳೆ ಎಂದು ಅರಿತ ಪ್ರಿಯಕರ ಸೆಲ್ಪಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.
ರಂಜಿತ್ ಕುಮಾರ್(25) ಆತ್ಮಹತ್ಯೆ ಗೆ ಶರಣಾದ ಯುವಕ. ರಂಜಿತ್ ಕುಮಾರ್ ತಮ್ಮ ದೂರದ ಸಂಬಂಧಿ ಆಂಧ್ರದ ಹಿಂದೂಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಇತ್ತೀಚೆಗೆ ಬೇರೋಬ್ಬ ಯುವಕನ ಜೊತೆ ಪ್ರೀತಿಗೆ ಬಿದ್ದಿದ್ದು, ಆ ಯುವಕನ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಮೃತ ರಂಜಿತ್ ಕುಮಾರ್ ಗೆ ಸಿಕ್ಕಿವೆ.
ಹೀಗಾಗಿ ಮನನೊಂದ ರಂಜಿತ್ ಕುಮಾರ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ವಿಷ ಸೇವಿಸಿ ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಗೂ ಮುನ್ನ ತನಗೆ ಮೋಸ ಮಾಡಿದ ಪ್ರಿಯತಮೆಗೆ ತಕ್ಕ ಶಿಕ್ಷೆ ಕೊಡಿಸುವಂತೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾನೆ.
ಸದ್ಯ ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಿಯತಮೆ ಹಾಗೂ ಆಕೆಯ ತಂದೆ, ಅಣ್ಣನ ವಿರುದ್ಧ ಪ್ರಕರಣ ದಾಖಲಾಗಿದೆ.