ಇಂದು ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ

Public TV
1 Min Read

ಬೆಂಗಳೂರು: ವಿಧಾನ ಪರಿಷತ್‍ನ ಮೂರು ಶಿಕ್ಷಕರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ಹೊರಬೀಳಲಿದೆ.

ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಪದವೀಧರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಮತ್ತು ಶಿಕ್ಷಕರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರ ಭವಿಷ್ಯ ಇಂದು ತಿಳಿಯಲಿದೆ. ಮರಿತಿಬ್ಬೇಗೌಡ, ರಮೇಶ್ ಬಾಬು, ಕ್ಯಾಪ್ಟವ್ ಗಣೇಶ್ ಕಾರ್ಣಿಕ್, ರಾಮಚಂದ್ರ ಗೌಡ ಮತ್ತು ಅಮರನಾಥ್ ಪಾಟೀಲ್ ಕಣದಲ್ಲಿರುವ ಪ್ರಮುಖರು.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

* ಬೆಂಗಳೂರು ಪದವೀಧರ
ಕಾಂಗ್ರೆಸ್- ರಾಮೋಜಿಗೌಡ
ಬಿಜೆಪಿ- ಅ. ದೇವೇಗೌಡ
ಜೆಡಿಎಸ್- ಅಚ್ಚೇಗೌಡ ಶಿವಣ್ಣ

* ನೈಋತ್ಯ ಪದವೀಧರ
ಕಾಂಗ್ರೆಸ್- ಎಸ್.ಪಿ. ದಿನೇಶ್
ಬಿಜೆಪಿ- ಅಯನೂರು ಮಂಜುನಾಥ್
ಜೆಡಿಎಸ್- ಅರುಣ್‍ಕುಮಾರ್

* ಈಶಾನ್ಯ ಪದವೀಧರ
ಕಾಂಗ್ರೆಸ್- ಚಂದ್ರಶೇಖರ್ ಪಾಟೀಲ
ಬಿಜೆಪಿ- ಶ್ರೀನಿವಾಸ
ಜೆಡಿಎಸ್- ಪ್ರತಾಪ್ ರೆಡ್ಡಿ
ವಾಟಾಳ್ ಪಕ್ಷ- ವಾಟಾಳ್ ನಾಗರಾಜ್

* ಆಗ್ನೇಯ ಶಿಕ್ಷಕ ಕ್ಷೇತ್ರ
ಕಾಂಗ್ರೆಸ್- ಎಂ. ರಾಮಪ್ಪ
ಬಿಜೆಪಿ- ವೈ.ಎ. ನಾರಾಯಣಸ್ವಾಮಿ
ಜೆಡಿಎಸ್- ರಮೇಶ್‍ಬಾಬು

* ದಕ್ಷಿಣ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್- ಎಂ. ಲಕ್ಷ್ಮಣ್
ಬಿಜೆಪಿ- ಬಿ. ನಿರಂಜನಮೂರ್ತಿ
ಜೆಡಿಎಸ್- ಮರಿತಿಬ್ಬೇಗೌಡ

* ನೈಋತ್ಯ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್- ಕೆ.ಕೆ. ಮಂಜುನಾಥ್
ಬಿಜೆಪಿ- ಗಣೇಶ್ ಕಾರ್ಣಿಕ್
ಜೆಡಿಎಸ್- ಎಸ್.ಎಲ್. ಭೋಜೇಗೌಡ

ಜೂ.8ರಂದು ಆರು ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಇಂದು ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *