ಕಡೂರಿನಲ್ಲಿ ನೀರಿನಲ್ಲಿಯೇ ಬೆಳಗಿತು ದೀಪ – ಸ್ಥಳೀಯರಲ್ಲಿ ಅಚ್ಚರಿ

Public TV
1 Min Read

ಚಿಕ್ಕಮಗಳೂರು: ನೀರಲ್ಲಿ ದೀಪ ಉರಿಯುತ್ತೆ ಅಂದ್ರೆ ಯಾರೂ ನಂಬೋದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಡೆಯೋ ಎಣ್ಣೆಹೊಳೆ ಪೂಜಾ ಕಾರ್ಯಕ್ರಮದಲ್ಲಿ ನೀರಿನಿಂದಲೇ ದೀಪ ಉರಿಸಿದ್ದಾರೆ.

12 ವರ್ಷಕ್ಕೊಮ್ಮೆ ನಡೆಯೋ ಈ ಪೂಜಾ ಕಾರ್ಯ ಕಳೆದ ವರ್ಷವೇ ನಡೆದಿತ್ತು. ಅಂದು ಮಳೆ ಬಂದೇ ಬರುತ್ತೆ ಅಂತ ಜನ ಕಾದು ಕೂತಿದ್ದರು. ಆದರೆ ಮಳೆ ಬಂದಿರಲಿಲ್ಲ. ಆದರೆ ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿದ ಹಿನ್ನೆಲೆಯಲ್ಲಿ ನದಿಗೆ ಪೂಜೆ ಮಾಡಿ ಆ ನೀರಿನಲ್ಲೇ ದೀಪ ಹಚ್ಚಿದ್ದಾರೆ.

ದೇವರ ಮುಂದಿನ ದೀಪದ ತುಂಬ ಎಣ್ಣೆ ಬದಲು ನೀರನ್ನೇ ಹಾಕಿದ್ದಾರೆ. ನೀರು ಖಾಲಿಯಾಗೋವರೆಗೂ ದೀಪ ಉರಿದಿದೆ. ಈ ಸುಮಧುರ ಘಳಿಗೆಯನ್ನ ಕಂಡ ಸ್ಥಳಿಯರು ಆಶ್ಚರ್ಯಕ್ಕೀಡಾಗಿ ಸೋಮೇಶ್ವರ ಸ್ವಾಮಿಗೆ ಉಘೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *