ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಲಘುವಾಗಿ ಪರಿಗಣಿಸ್ಬೇಡಿ: ಎಚ್‍ಡಿಕೆ

Public TV
3 Min Read

ಬೆಂಗಳೂರು: ನೂತನ ಸರ್ಕಾರದ ಬಗ್ಗೆ ಯಾರಿಗೂ ಅನುಮಾನಬೇಡ, ರಾಜ್ಯದ ಜನತೆಗೆ ಸುಭದ್ರ ಸರ್ಕಾರ ನೀಡುತ್ತೇವೆ ಅಂತಾ ಭರವಸೆ ನೀಡುತ್ತೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ. ಯಾರು ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಲಘುವಾಗಿ ಪರಿಗಣಿಸಬೇಡಿ ಅಂತಾ ಎಚ್ಚರಿಕೆ ನೀಡಿದ್ರು.

ನಾಡಿದ್ದು ನಾವು ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗುತ್ತವೆ. ರಾಜೀನಾಮೆಗೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಭಾವನಾತ್ಮಕವಾಗಿ ಮಾತನಾಡಿ, ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ ಅಂತಾ ಹೇಳಿದ್ರು. ರಸ್ತೆಗಿಳಿದು ಪ್ರತಿಭಟನೆ ಮಾಡುವ ಅವಕಾಶವೇ ನಮ್ಮ ಸರ್ಕಾರ ನೀಡಲ್ಲ ಅಂತಾ ಟಾಂಗ್ ಕೊಟ್ಟರು.

ಎರಡು ಪಕ್ಷಗಳಿಗೆ ಕ್ರೆಡಿಟ್: ಇದು ಮೈತ್ರಿ ಸರ್ಕಾರವಾಗಿದ್ದು, ಎಲ್ಲವನ್ನು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರ ವಿಶ್ವಾಸವನ್ನೇ ತೆಗೆದುಕೊಂಡು ಯೋಜನೆಗಳನ್ನು ಜಾರಿ ಮಾಡುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಜಾರಿಯಾಗುವ ಯೋಜನೆಗಳ ಕ್ರೆಡಿಟ್ ಎರಡೂ ಪಕ್ಷಗಳಿಗೆ ಹೋಗಬೇಕು. ರೈತರ ಸಾಲ ಮನ್ನಾ ಮಾಡಲ್ಲ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಜಾರಿಗೊಳಿಸಬೇಕು. ನನ್ನ ಬಳಿಯೂ ಯಾವ ರೀತಿಯಲ್ಲಿ ಸಾಲಮನ್ನಾ ಮಾಡಬೇಕೆಂಬ ಬ್ಲೂ ಪ್ರಿಂಟ್ ಬಳಿ ಇದೆ. ಒಬ್ಬ ಸಾಮಾನ್ಯ ಪತ್ರಕರ್ತ ಸಹ ನನ್ನ ಕಚೇರಿಗೆ ಬಂದು ನನ್ನ ತಪ್ಪುಗಳ ಬಗ್ಗೆ ಮಾಹಿತಿ ನೀಡಬಹುದು. ಇದು ನನಗೆ ರಾಜ್ಯದ ಜನತೆಗೆ ಉತ್ತಮ ಸರ್ಕಾರ ನೀಡುವಲ್ಲಿ ಸಹಾಯವಾಗಲಿದೆ ಅಂತಾ ತಿಳಿಸಿದ್ರು.

ನಾನು ಹಿಂದೆ ಸುವರ್ಣ ಗ್ರಾಮ ಯೋಜನೆ ಅಂತಹ ಹಲವು ಕಾರ್ಯಕ್ರಮಗಳನ್ನು ಆರಂಭಿಸಿದ್ದೆ. ಆದ್ರೆ ನಮ್ಮ ಸರ್ಕಾರದ ಬಳಿಕ ಎಲ್ಲವೂ ನಿಂತು ಹೋಗಿವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ ಪರಮೇಶ್ವರ್ ಅವರ ಬದಲಾಗಿ ನಾನೇ ಭರವಸೆ ನೀಡುತ್ತೇನೆ ಅಂತಾ ಹೇಳಿದ್ರು.

ಕೆಲವು ಸ್ವಾಮೀಜಿಗಳು ನಿಮಗೆ ಜಾತಿ ವ್ಯಾಮೋಹವಿದ್ರೆ ಅದನ್ನ ನಿಮ್ಮ ಕ್ಷೇತ್ರದಲ್ಲಿ ಇಟ್ಟುಕೊಳ್ಳಿ. ನಾನು ರಾಜಕಾರಣದಲ್ಲಿ ಯಾರನ್ನು ಜಾತಿಯಿಂದ ಗುರುತಿಸಿಲ್ಲ. ಇವತ್ತು ಬೆಳಗ್ಗೆ ಒಬ್ಬ ಹಿರಿಯ ಸ್ವಾಮೀಜಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಗ್ಗೆ ಅತ್ಯಂತ ಕೆಟ್ಟದಾಗಿ ಟೀಕಿಸಿದ್ರು. ಹೀಗೆ ಟೀಕೆ ಮಾಡುವವರು ರಾಜಕಾರಣಕ್ಕೆ ಬನ್ನಿ, ಗುರುವಿನ ಸ್ಥಾನದಲ್ಲಿದ್ದವರು ರಾಜಕಾರಣದ ಬಗ್ಗೆ ಟೀಕಿಸಬಾರದು. ನಿಮ್ಮ ಕೆಲಸ ಧರ್ಮದ ಪ್ರಚಾರ, ನಾಡಿನ ಜನತೆಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಆಶೀರ್ವದಿಸಬೇಕು. ನಾನು ಮಠಾಧೀಶರಿಗೆ ಗೌರವ ನೀಡುವವನು. ಈ ರೀತಿಯ ಬಗ್ಗೆ ಮಾತನಾಡುವದರಿಂದ ಜನರು ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತಾ ತಿಳಿದುಕೊಳ್ಳಿ. ಸ್ವಾಮೀಜಿಗಳು ರಾಜಕೀಯ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡೋದ್ನು ನಿಲ್ಲಿಸಬೇಕು ಎಂದು ಹೇಳಿದರು.

ಕುದುರೆಯನ್ನು ಕಟ್ಟಿ ಹಾಕಿದ್ದೇವೆ: ಕರ್ನಾಟಕದಲ್ಲಿ ಸಂಪೂರ್ಣ ಮುಳುಗಿ ಹೋಗುತ್ತಿದ್ದ ಬಿಜೆಪಿ ನನ್ನ ಲಾಭ ಪಡೆದುಕೊಂಡು ಸರ್ಕಾರ ರಚನೆ ಮಾಡಿತ್ತು. ಈಗ ನರೇಂದ್ರ ಮೋದಿಯವರ ಅಶ್ವಮೇಧ ಕುದುರೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಕಟ್ಟಿ ಹಾಕಿದೆ. ಸದ್ಯ ಕುದುರೆಯನ್ನು ನಾವು ಕಟ್ಟಿಹಾಕಿದ್ದು, ಮುಂದಿನ ದಿನಗಳಲ್ಲಿ ಅಮಿತ್ ಶಾ ಜೀವವಿಲ್ಲದ ಕುದುರೆಯನ್ನು ತೆಗೆದುಕೊಂಡು ಪ್ರಧಾನಿಗಳ ಬಳಿ ಹೋಗಬಹುದು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಯಾರ ಬಗ್ಗೆ ಲಘುವಾಗಿ ಮಾತನಾಡಬೇಡಿ ಅಂತಾ ವಾಗ್ದಾಳಿ ನಡೆಸಿದ್ರು.

ಬಿಜೆಪಿ ಐದು ವರ್ಷದ ಆಡಳಿತದಲ್ಲಿ ಬೆಂಗಳೂರೂ ಜನರಿಗೆ ಏನು ಕೊಟ್ಟಿದ್ದೀರಿ. ಮಹದಾಯಿ ಬಗ್ಗೆ ಭರವಸೆ ಕೊಟ್ಟಿದ್ದರಿಂದ ಅಲ್ಲಿಯ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪನ್ನು ಕೊಡುವ ಬದಲು, ಮೋದಿಯವರು ಮಧ್ಯಸ್ಥಿಕೆ ವಹಿಸಬೇಕಿತ್ತು. ಈ ಸಂಬಂಧ ದೇವೇಗೌಡರು ಪ್ರಧಾನಿಗಳನ್ನು ಭೇಟಿ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ನ್ಯಾಯಾಧಿಕರಣ ತೀರ್ಪು ಬಂದ ಬಳಿಕ ಚರ್ಚೆ ನಡೆಸಲಾಗುವುದು. ಲಿಂಗಾಯತ ವಿವಾದಕ್ಕಿಂತಲೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಮೊದಲು ಎಲ್ಲವನ್ನು ಪರಿಹಾರವಾದ ಬಳಿಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *