ಬಾಗಲಕೋಟೆ: ಎದುರು ಬರುತ್ತಿದ್ದ ರೈಲು ಏರಲು ಹೋಗಿ ವ್ಯಕ್ತಿಯೊರ್ವ ರೈಲ್ವೇ ಹಳಿಗೆ ಸಿಲುಕಿ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಬಾಗಲಕೋಟೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಅಷ್ಪಾಕ್ ಅಹಮದ್ ಗಂಗಳಿ ಬದುಕುಳಿದ ವ್ಯಕ್ತಿ. ವಿಜಯಪುರ ನಿವಾಸಿಯಾಗಿರುವ ಅಷ್ಪಾಕ್ ಬಾಗಲಕೋಟೆಯಿಂದ ವಿಜಯಪುರಕ್ಕೆ ಹೊರಡುವ ರೈಲು ಏರಲು ಉತ್ಸುಕರಾಗಿದ್ದರು. ರೈಲು ನಿಲ್ಲುವ ಮುನ್ನವೇ ಏರಲು ಹೋದಾಗ ಆಯತಪ್ಪಿ ಅಷ್ಪಾಕ್ ಅಹಮದ್ ಕಾಲು ಹಳಿ ಭಾಗದಲ್ಲಿ ಸಿಲುಕಿದೆ.
ತಕ್ಷಣ ಅಲ್ಲಿದ್ದ ಜನ ಕಿರುಚಲು ಆರಂಭಿಸಿದಾಗ ಸ್ಥಳಕ್ಕೆ ಧಾವಿಸಿದ ರೈಲ್ವೇ ಪೊಲೀಸರು ಅಷ್ಪಾಕ್ ಅಹಮದ್ರ ರಕ್ಷಣೆಗೆ ಮುಂದಾದ್ದರು. ಪರಿಣಾಮ ಎಡಕಾಲಿಗೆ ಗಂಭೀರ ಗಾಯವಾಗಿದ್ದು, ಕಾಲು ನಜ್ಜುಗುಜ್ಜಾಗಿದೆ.
ಕೂಡಲೇ ಗಾಯಳು ಅಷ್ಪಾಕ್ ನನ್ನ ಅಂಬುಲೆನ್ಸ್ ಮೂಲಕ ಬಾಗಲಕೋಟೆ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರು ಹಾಗೂ ರೈಲ್ವೇ ಇಲಾಖೆ ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಅಷ್ಪಾಕ್ ಬದುಕುಳಿದಿದ್ದಾರೆ.