ಕೆಲ ದಿನ ಮಾತ್ರ ಬಿಜೆಪಿಯವರಿಗೆ ಸಂತೋಷ: ಎಚ್‍ಡಿಕೆ

Public TV
1 Min Read

ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದ್ದರೆ, ಬಿಜೆಪಿ ನಾಯಕರು ಕೆಲ ದಿನ ಸಂತೋಷದಿಂದ ಇರಲು ಸಾಧ್ಯ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಯಾವುದೇ ಪ್ರತಿಭಟನೆ ಮಾಡಲು ನಾವು ಸಿದ್ಧವಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ. ಬಿಜೆಪಿಗೆ ನೀಡಿರುವ ಅವಕಾಶವನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಲು ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಯಾವುದೇ ಕುದುರೆ ವ್ಯಾಪಾರಕ್ಕೆ ಮುಂದಾಗದೇ ಮೌಲ್ಯಯುತ ಹಾದಿಯಲ್ಲಿ ಅಧಿಕಾರ ಪಡೆಯಲಿ. ನಮ್ಮ ಮುಂದಿನ ನಿರ್ಧಾರವನ್ನು ಶಾಸಕರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ. ಆದರೆ ರಾಜ್ಯ ಜನತೆ ನಾಳೆ ಯಾವುದೇ ಪ್ರತಿಭಟನೆ ನಡೆಸಲು ಮುಂದಾಗಬಾರದು. ಶಾಂತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ನಾವು ರಾಜ್ಯಪಾಲರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಆದರೆ ರಾಜ್ಯಪಾಲರು ಬಿಎಸ್‍ವೈ ಅವರಿಗೆ ಅಹ್ವಾನ ನೀಡಿದ್ದರೆ ಅದು ಬಿಜೆಪಿ ಅವರ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತದೆ. ಮೋದಿ ಅವರ ಸ್ವಚ್ಛ ರಾಜಕಾರಣ ನಡೆಸಲು ಮುಂದಾಗಿದ್ದರಾ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *