ಮಾವನ ಪರ ಪ್ರಚಾರಕ್ಕಿಳಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

Public TV
1 Min Read

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ದಿಢೀರನೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾವನ ಪರ ಪ್ರಚಾರ ಮಾಡಲು ಶುರುಮಾಡಿದ್ದಾರೆ.

ರಾಕೇಶ್ ಸಿದ್ದರಾಮಯ್ಯ ಅವರ ಪತ್ನಿ ಸ್ಮಿತಾ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ರಾಕೇಶ್ ನಿಧನರಾದಗಲೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳಲಿಲ್ಲ. ಈಗ ದಿಢೀರನೆ ಮಾವನ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವುದು ರಾಜಕೀಯದ ಬೇರೆ ಬೇರೆ ಲೆಕ್ಕಾಚಾರಕ್ಕೆ ದಾರಿ ಮಾಡಿ ಕೊಟ್ಟಿದೆ.

ಸಿಎಂ ಅವರೇ ಹೇಳುವ ಪ್ರಕಾರ ಇದು ಅವರ ಕೊನೆ ಚುನಾವಣೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಸೊಸೆಗೆ ವಹಿಸುವ ಉದ್ದೇಶದಿಂದ ಸೊಸೆಯನ್ನು ನಿಧಾನವಾಗಿ ಕ್ಷೇತ್ರಕ್ಕೆ ಪರಿಚಯಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮಗ ಯತೀಂದ್ರ ಗೆ ವರುಣಾ ಕ್ಷೇತ್ರ, ಸೊಸೆಗೆ ಚಾಮುಂಡೇಶ್ವರಿ ಕ್ಷೇತ್ರ ಎನ್ನುವ ಆಲೋಚನೆ ಸಿಎಂ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಕಾಣಿಸಿಕೊಳ್ಳದ ಸಿಎಂ ಸೊಸೆ ಏಕಾಏಕಿ ಮಾವನ ಪರ ಮತಯಾಚನೆ ಗೆ ಇಳಿಯೋದಕ್ಕೆ ಸಾಧ್ಯವಿಲ್ಲ. ಮನೆ ಮಂದಿಯನ್ನು ತಮ್ಮ ಗೆಲುವಿಗಾಗಿ ಓಡಾಡಿಸುವ ವ್ಯಕ್ತಿತ್ವ ಸಿಎಂ ಅವರದಲ್ಲ. ಯಾವುದೋ ರಾಜಕೀಯದ ಪ್ಲಾನ್ ನಿಂದಲೆ ಸೊಸೆಯನ್ನು ಸಿಎಂ ಪ್ರಚಾರಕ್ಕೆ ಇಳಿಸಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *