ಬೆಂಗಳೂರು: ಉಂಡು ಹೋದ ಕೊಂಡು ಹೋದ ಅಂದವ ಇಂದು ಅಂದರ್ ಆಗಿದ್ದಾನೆ. ಪೊಲೀಸರ ಅತಿಥಿಯಾಗಿರುವ ಈ ಮಹಾನ್ಭಾವನ ಹೆಸರು ರಮೇಶ್ ಅಲಿಯಾಸ್ ಚೊಟ್ಟ ರಮೇಶ್.
ಮೂಲತಃ ದೊಡ್ಡಬಳ್ಳಾಪುರದವನ್ನಾಗಿದ್ದು ಬಾಣಸಿಗನಾಗಿ ಕೆಲಸ ಮಾಡಿಕೊಂಡಿದ್ದ. ಇವನಿಗಿರೋ ದುಶ್ಚಟಕ್ಕೆ, ಅನ್ನ ಹಾಕಿದ್ದ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಈತ ಕೊಲೆಯಾದ ಚಂದ್ರಕಲಾ ಫ್ಯಾಮಿಲಿಗೆ 8 ವರ್ಷಗಳಿಂದ ಪರಿಚಯಸ್ಥನಾಗಿದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ಈತ ಸಾಲ ಮಾಡಿಕೊಂಡಿದ್ದಲ್ಲದೇ, ಆ ಸಾಲ ತೀರಿಸಲು ಚಂದ್ರಕಲಾರನ್ನ ಕೊಲೆ ಮಾಡಿ ಮಾಂಗಲ್ಯ ಸರದೋಚಿದ್ದ.
ಮಹಿಳೆಯ ಕೊಲೆ ನಡೆದು 24 ಗಂಟೆಯಲ್ಲೇ ಆರೋಪಿ ರಮೇಶ್ನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 75 ಗ್ರಾಂ ಚಿನ್ನ ಮತ್ತು ನಗದನ್ನ ವಶಕ್ಕೆ ಪಡೆದಿದ್ದಾರೆ.
ಒಟ್ಟಿನಲ್ಲಿ ಹಣದಾಸೆಗೆ ಹಸಿವು ಅಂದಾಗ ಅನ್ನ ಹಾಕಿ ಹಸಿವು ನೀಗಿಸಿದ್ದ ಮಹಿಳೆಯನ್ನ ಹೀನಾಯವಾಗಿ ಕೊಂದ ಪಾಪಿ ಚೊಟ್ಟ ರಮೇಶ ಇದೀಗ ಜೈಲು ಸೇರಿದ್ದಾನೆ.