ಅಣ್ಣ ಸಲ್ಮಾನ್ ಗೆ ಭಾವನಾತ್ಮಕ ಸಂದೇಶ ಬರೆದ ಅರ್ಪಿತಾ ಖಾನ್

Public TV
2 Min Read

ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನ ಜೈಲುವಾಸ ಮಾಡಿ ಬಿಡುಗಡೆಗೊಂಡ ಬಳಿಕ ಸಹೋದರಿ ಅರ್ಪಿತಾ ಖಾನ್ ಅವರು ಸಲ್ಮಾನ್ ಖಾನ್ ಅವರಿಗೆ ಭಾವನಾತ್ಮಕ ಸಂದೇಶವನ್ನು ನೀಡಿದ್ದಾರೆ.

ಸಲ್ಮಾನ್ ಖಾನ್ ಅವರ ಫೋಟೋದೊಂದಿಗೆ ಈ ಸಂದೇಶವನ್ನು ಹಾಕಿದ್ದ ಸ್ಕ್ರೀನ್ ಶಾಟ್ ತೆಗೆದು ಬಳಿಕ ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅರ್ಪಿತಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

ಸಂದೇಶದಲ್ಲೇನಿದೆ?: ನನ್ನ ಶಕ್ತಿ, ನನ್ನ ದೌರ್ಬಲ್ಯ, ನನ್ನ ಹೆಮ್ಮೆ, ನನ್ನ ಖುಷಿ, ನನ್ನ ಜೀವನ ಹಾಗೂ ನನ್ನ ವಿಶ್ವ. ದೇವರ ಮಗ. ನಿನ್ನ ಗೆಲುವನ್ನು ಕಾಣಲು ಸಾಧ್ಯವಾಗದವರಿಗೆ ದೇವರು ಒಳ್ಳೆಯದನ್ನೇ ಮಾಡಲಿ. ನಿನ್ನ ಧನಾತ್ಮಕ ಚಿಂತನೆ ಹಾಗೂ ತಂತಸದಲ್ಲಿ ಅಸೂಯೆ ಹಾಗೂ ಋಣಾತ್ಮಕ ಚಿಂತನೆಗಳು ಮಾಯವಾಗಲಿ. ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಹಾಗೆಯೇ ನಿನ್ನ ಗೆಲುವು ಹಾಗೂ ಒಳ್ಳೆತನ ಎಲ್ಲರನ್ನೂ ಕುರುಡರನ್ನಾಗಿ ಮಾಡಲಿ. ಲವ್ ಯೂ ಭಾಯ್ ಅಂತ ಬರೆದುಕೊಂಡಿದ್ದಾರೆ.

ಅರ್ಪಿತಾ ಅವರು ಖಾನ್ ಕುಟುಂಬದ ದತ್ತು ಪುತ್ರಿಯಾಗಿದ್ದು, ಸಲ್ಮಾನ್ ಖಾನ್ ಅವರ ಮುದ್ದಿನ ತಂಗಿ. ಈಕೆಗೆ ಆಯುಶ್ ಶರ್ಮಾ ಎಂಬವರ ಜೊತೆ ಮದುವೆ ಮಾಡಿಕೊಡಲಾಗಿದ್ದು, ಇದೀಗ ದಂಪತಿಗೆ ಆಹಿಲ್ ಅನ್ನೋ ಮಗನಿದ್ದಾನೆ. ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಮೊದಲು 5 ವರ್ಷ ಜೈಲು ಹಾಗೂ 50,000 ದಂಡ ವಿಧಿಸಲಾಗಿತ್ತು. ಹೀಗಾಗಿ ಎರಡು ದಿನ ಜೈಲುವಾಸ ಕೂಡ ಅನುಭವಿಸಿದ್ದರು. ಈ ಮಧ್ಯೆ ಖಾನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂಧರ್ ಜೋಶಿ ಅವರು ಸಲ್ಮಾನ್ ಖಾನ್ ಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿ ಜೋಧ್‍ಪುರ್ ಕೋರ್ಟ್ ಆದೇಶವನ್ನು ಹೊರಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *