ಕೋಲಾರದಲ್ಲಿ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆ ಆರಂಭಿಸಿದ್ರು!

Public TV
1 Min Read

ಕೋಲಾರ: ನಗರದ ಖಾದರ್ ಲೇಔಟ್‍ನ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆಯನ್ನು ಆರಂಭಿಸಲಾಗಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ತನ್ನ ಪತ್ನಿ ಸುಗುಣ ಹೆಸರಿನಲ್ಲಿ ಕೆಸಿಆರ್ ಎಂಬ ಫಂಕ್ಷನ್ ಹಾಲ್ ನಿರ್ಮಿಸಿದ್ರು. ಇದಕ್ಕಾಗಿ ಸರ್ವೇ ನಂಬರ್ 1ರಲ್ಲಿ ರಸ್ತೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು.

ಆದ್ರೆ ಇದೀಗ ಅದೇ ಕಟ್ಟಡದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ. ಕಳೆದ ವರ್ಷ ತರಾತುರಿಯಲ್ಲಿ ಕಟ್ಟಿರುವ ಈ ಕಟ್ಟಡದಲ್ಲಿ 37 ಮಕ್ಕಳು ದಾಖಲಾಗಿದ್ದಾರೆ. ಆದ್ರೆ ಇಲ್ಲಿ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆಗಳಿಲ್ಲ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಿಲ್ಲ ಎನ್ನಲಾಗಿದೆ.

ಕೆ.ಚಂದ್ರಾರೆಡ್ಡಿ ತನ್ನ ಪ್ರಭಾವ ಬಳಸಿ ಗಡಿಗ್ರಾಮ ದೊಡ್ಡಪೊನ್ನಾಂಡಹಳ್ಳಿಗೆ ಮಂಜೂರಾದ ಶಾಲೆಯನ್ನು ಬಂಗಾರಪೇಟೆಯಲ್ಲಿ ಆರಂಭಿಸಿ, 1 ಲಕ್ಷದ 85 ಸಾವಿರದ 650 ರೂಪಾಯಿ ಬಾಡಿಗೆ ಪೀಕುತ್ತಿದ್ದಾನೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *