ಬೆಂಗಳೂರು: ಎಲೆಕ್ಷನ್ ಕಾವು ಒದೆಡೆಯಾದ್ರೆ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಎಕ್ಸಾಂ. ಇದರಿಂದ ರಾಜ್ಯದ ದೇವರುಗಳೆಲ್ಲಾ ದಿಢೀರ್ ಶ್ರೀಮಂತವಾಗುತ್ತಿವೆ.
ಮಹಾಸಮರಕ್ಕೆ ಅಖಾಡ ರೆಡಿಯಾಗುತ್ತಿದ್ದಂತೆ ರಾಜಕೀಯ ನಾಯಕರುಗಳು ಮತದಾರರ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಇರೋ ಬರೋ ದೇವರ ಹುಂಡಿಗೆ ಜೈ.. ಜೈ ಅಂತ ದುಡ್ಡು ಹಾಕುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಸೀಸನ್, ಮಕ್ಕಳು, ಪೋಷಕರು ಹರಕೆ ಹೊತ್ತು ಮಕ್ಕಳನ್ನು ಪಾಸ್ ಮಾಡಪ್ಪ ಎಂದು ದೇವರ ಹುಂಡಿಗೆ ಲಂಚದ ರೂಪದಲ್ಲಿ ಕಾಣಿಕೆ ಹಾಕಿದ್ದಾರೆ. ಇದರ ಎಫೆಕ್ಟ್ ಬನಶಂಕರಿಯಮ್ಮನ ಹುಂಡಿ ತುಂಬಿದ್ದು, ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದೆ.
ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಹುಂಡಿ ತೆರೆಯೋದು ಸಾಮಾನ್ಯ. ಆದರೆ ಮಾರ್ಚ್ ಇಯರ್ ಎಂಡ್ ಎಂದು ಒಂದೇ ತಿಂಗಳ ಅಂತರದಲ್ಲಿ ಹುಂಡಿ ತೆರೆದಾಗ ಬರೋಬ್ಬರಿ 30 ಲಕ್ಷ ಸಂಗ್ರಹವಾಗಿದೆ. ಸಾಮಾನ್ಯವಾಗಿ ಎರಡು ತಿಂಗಳಲ್ಲಿ 20 ರಿಂದ 25 ಲಕ್ಷ ದುಡ್ಡು ಸಂಗ್ರಹವಾಗುತ್ತಿದ್ದು, ಈ ಬಾರಿ ದಿಢೀರ್ ಅಂತ 30 ಲಕ್ಷ ರೂ. ಸಂಗ್ರವಾಗಿರುವುದಕ್ಕೆ ಅಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ. ದುಡ್ಡಿನ ಜೊತೆಗೆ ಚಿನ್ನ ಬೆಳ್ಳಿಯೂ ದಾಖಲೆಯ ಮಟ್ಟದಲ್ಲಿ ಹುಂಡಿಗೆ ಬಿದ್ದಿದೆ.
ಇನ್ನು ಪರೀಕ್ಷೆಗೆ ಮಕ್ಕಳು ಓದೇ ಇಲ್ಲ, ನೀನೇ ಕಾಪಾಡಬೇಕು ಪಾಸು ಮಾಡಿಸು ಎಂದು ಬೇಡಿಕೊಂಡು ಲೆಕ್ಕವಿಲ್ಲದಷ್ಟು ಪತ್ರ ಹುಂಡಿಗೆ ಬಿದ್ದಿದೆಯಂತೆ. ರಾಜಕೀಯ ಉನ್ನತಿ, ಶೈಕ್ಷಣಿಕ, ಮನೆ ಸಮಸ್ಯೆ ಏನೇ ಇದ್ದರೂ ಇಲ್ಲಿ ಹರಕೆ ಹೊತ್ತಿದರೆ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಿಗಿದೆ.
ಎಲೆಕ್ಷನ್ ಪ್ರಾರಂಭದಲ್ಲಿಯೇ ಹಣ ದಾಖಲೆಯ ಮಟ್ಟ ಏರಿದೆ, ಮುಂದಿನ ತಿಂಗಳು ಇನ್ನು ಹೆಚ್ಚು ಹುಂಡಿ ದರ ಸಂಗ್ರಹವಾಗಬಹುದು ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.