ಡಿಜೆ ಮ್ಯೂಸಿಕ್ ವಿಚಾರದಲ್ಲಿ 2 ಕೋಮುಗಳ ಮಧ್ಯೆ ಘರ್ಷಣೆ- ಬಿಡಿಸಲು ಹೋದ ಯುವಕ ದಾರುಣ ಸಾವು

Public TV
1 Min Read

ಹುಬ್ಬಳ್ಳಿ: ಎರಡು ಕೋಮಿನ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಚಿಕಿತ್ಸೆ ಫಲಿಸದೆ ಯುವಕನೊಬ್ಬ ಮೃತಪಟ್ಟ ಘಟನೆ ಹಳೆ ಹುಬ್ಬಳ್ಳಿಯ ಇಸ್ಲಾಂ ಪುರದ ಗೌಸಿಯಾ ಟೌನ್ ನಲ್ಲಿ ನಡೆದಿದೆ.

ಗುರುಸಿದ್ದಪ್ಪ ಅಂಬಿಗೇರ(26) ಎಂಬಾತನೇ ಮೃತಪಟ್ಟ ಯುವಕ. ಗುಂಪು ಘರ್ಷಣೆ ಬಿಡಿಸಲು ಬಂದಾಗ ಈತನ ಮೇಲೆ ಚಾಕು ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕೂಡಲೇ ಗಾಯಾಳುವನ್ನು ಕಿಮ್ಸ್ ಗೆ ದಾಖಲು ಮಾಡಲಾಗಿತ್ತು.

ಆದ್ರೆ ಚಿಕಿತ್ಸೆ ಫಲಿಸದೇ ಗುರುಸಿದ್ದಪ್ಪ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಡಿಜೆ ಮ್ಯೂಸಿಕ್ ವಿಷಯಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಈ ಘಟನೆ ಸಂಭವಿಸಿದೆ.

ಇಫ್ತಾಕ್ ಕಾಲವಾಡ, ಅಸ್ಲಂ ಕಾಲವಾಡ ಸಹೋದರರ ದಾಳಿ ಮಾಡಿದ ಆರೋಪಿಗಳು ಎನ್ನಲಾಗಿದೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

https://www.youtube.com/watch?v=FnUAodyjHQE

Share This Article
Leave a Comment

Leave a Reply

Your email address will not be published. Required fields are marked *