ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ – ಸಾವಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Public TV
1 Min Read

ಹೈದರಾಬಾದ್: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲಾ ಚಿರಾಲ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬಾಪಟ್ಲಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದ ವಿದ್ಯಾರ್ಥಿ ಶಿವ (18) ಮೃತ ವಿದ್ಯಾರ್ಥಿ. ರೈಲಿನಲ್ಲಿ ಚೆನ್ನೈಗೆ ತೆರಳುತ್ತಿದ್ದ ಶಿವ ಮಾರ್ಗ ಮಧ್ಯೆ ಬಂದ ಚಿರಾಲ ನಿಲ್ದಾಣದಲ್ಲಿ ನೀರು ಕುಡಿಯಲು ಇಳಿದಿದ್ದ. ನಿಂತಿದ್ದ ರೈಲು ಚಲಿಸಲು ಆರಂಭಿಸಿ ಕ್ಷಣ ಮಾತ್ರದಲ್ಲಿ ವೇಗ ಪಡೆದುಕೊಂಡ ಕಾರಣದಿಂದ ಶಿವ ಕಾಲು ಜಾರಿ ರೈಲಿನ ಅಡಿ ಸಿಕ್ಕಿದ್ದಾನೆ.

ಚಕ್ರಕ್ಕೆ ಸಿಲುಕಿದ ಕಾರಣ ಆತನ ಎರಡು ಕಾಲುಗಳು ಕಟ್ ಆಗಿದ್ದು, ತಕ್ಷಣ ಆತನ ಸ್ನೇಹಿತ ತುರ್ತು ಸೇವೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲು ಯತ್ನಿಸಿದ್ದಾನೆ. ಆದರೆ ಆ ವೇಳೆಗೆ ಶಿವನ ಪ್ರಾಣ ಹೋಗಿತ್ತು.

ಮೃತ ಶಿವ ತಂದೆ ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿವ ಅವರ ಕೊನೆಯ ಮಗನಾಗಿದ್ದ.

Share This Article
Leave a Comment

Leave a Reply

Your email address will not be published. Required fields are marked *