ಬಿಎಸ್‍ವೈ ಪೆದ್ದ ಅಲ್ಲ ಜೋಕರ್ ಎಂದ ಎಂ.ಬಿ ಪಾಟೀಲ್ – ಮಾಧ್ಯಮಗಳಿಗೆ ಗೊತ್ತಾಗ್ಲಿ ಅಂತಾನೇ ಹೇಳಿದ್ದು ಅಂದ್ರು ಸಿಎಂ

Public TV
1 Min Read

ಬೆಂಗಳೂರು: ಬಿಎಸ್ ಯಡಿಯೂರಪ್ಪ ಪೆದ್ದ ಅಲ್ಲಾ ಜೋಕರ್ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂಬಿ ಪಾಟೀಲ್ ನಡುವೆ ಮಾತುಕತೆ ನಡೆಯುತ್ತಿದ್ದ ವೇಳೆ ಎಂ.ಬಿ ಪಾಟೀಲ್ ಈ ಮಾತು ಹೇಳಿದ್ದಾರೆ. ಏನಪ್ಪಾ ನಿಂದು, ಯಡಿಯೂರಪ್ಪದೂ ಭಾರೀ ಲವ್ ಸ್ಟಾರ್ಟ್ ಆಗಿದೆ. ಸಿಎಂ ಆಗಿದ್ದವನು ಅಷ್ಟು ಪೆದ್ದನಾ ಅವನು ಎಂದು ಸಿದ್ದರಾಮಯ್ಯ ಹೇಳಿದ್ರು. ಸಿಎಂ ಮಾತಿಗೆ ಉತ್ತರಿಸಿದ ಎಂಬಿ ಪಾಟೀಲ್, ಪೆದ್ದ ಅಲ್ಲಾ ಜೋಕರ್ ಎಂದರು.

ಈ ವೇಳೆ ಮೀಡಿಯಾಗಳಿವೆ ಎಚ್ಚರ ಎಂದು ಶಾಸಕ ನಾಗೇಂದ್ರ ಎಚ್ಚರಿಸಿದ್ರು. ಆದ್ರೆ ಇದಕ್ಕೆ ಸಿಎಂ ಸಿದ್ದರಾಮಯ್ಯ, ಮೀಡಿಯಾಗಳಲ್ಲಿ ಹೋಗಲಿ ಅಂತನೇ ಹೇಳಿದ್ದು ಎಂದರು.

Share This Article
Leave a Comment

Leave a Reply

Your email address will not be published. Required fields are marked *