ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

Public TV
1 Min Read

ಮುಂಬೈ: ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನಕ್ಕೆ ಹಲವು ಸ್ಟಾರ್ ಗಳು ಶುಭಕೋರಿ ಟ್ವೀಟ್ ಮಾಡಿದ್ದಾರೆ.

ದಿನೇಶ್ ಅವರ ಆಟವನ್ನ ಮೆಚ್ಚಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ದರು. ಆದರೆ ಬಳಿಕ ಮತ್ತೊಂದು ಟ್ವೀಟ್ ಮಾಡಿ ದಿನೇಶ್ ಕಾರ್ತಿಕ್‍ಗೆ ಕ್ಷಮೆ ಕೋರಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಮಿತಾಬ್ ತಮ್ಮ ಟ್ವೀಟ್ ನಲ್ಲಿ ತಪ್ಪಾಗಿ ಟೈಪ್ ಮಾಡಿದ್ದರು.

ಮೊದಲು ಟ್ವೀಟ್ ಮಾಡಿದ್ದ ಅಮಿತಾಬ್, ಎರಡು ಓವರ್ ಗಳಲ್ಲಿ 24 ರನ್ ಗಳಿಸಬೇಕಿತ್ತು. ದಿನೇಶ್ ಕಾರ್ತಿಕ್ ಬ್ರಿಲಿಯಂಟ್ ನಾಕ್.. ಒಂದು ಎಸೆತದಲ್ಲಿ 5 ರನ್ ಗಳಿಸ ಬೇಕಾದ ವೇಳೆ ಸಿಕ್ಸ್ ಸಿಡಿಸಿದ್ದಾರೆ. ನಿಮಗೇ ಅಭಿನಂದನೆಗಳು ಎಂದು ಹೇಳಿದ್ದರು. ಈ ಟ್ವೀಟ್ ನಲ್ಲಿ 34 ರನ್ ಬದಲಾಗಿ 24 ರನ್ ಎಂದು ಬರೆದಿದ್ದರು. ತಪ್ಪು ಗೊತ್ತಾದ ಬಳಿಕ `ದಿನೇಶ್ ಕಾರ್ತಿಕ್ ಸಾರಿ’ ಎಂದು ಬರೆದು ಎರಡನೇ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

ತಮ್ಮ ಸಣ್ಣ ತಪ್ಪಿಗೆ ದಿನೇಶ್ ಕಾರ್ತಿಕ್ ಬಳಿ ಕ್ಷಮೆ ಕೋರಿದ ಅಮಿತಾಬ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದೆ. ಇನ್ನುಳಿದಂತೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬುಮ್ರಾ, ಅಶ್ವಿನ್, ಹರ್ಭಜನ್ ಸೇರಿದಂತೆ ಹಲವು ಆಟಗಾರರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನು ಓದಿ: ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

Share This Article
Leave a Comment

Leave a Reply

Your email address will not be published. Required fields are marked *