ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಕ್ಕೆ ಆಪ್ ಕಾರ್ಯಕರ್ತರ ವಿರುದ್ಧ ಅನ್ಸಾರಿ ಬೆಂಬಲಿಗರ ವಾಗ್ವಾದ

Public TV
1 Min Read

ಕೊಪ್ಪಳ: ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸಿದಕ್ಕೆ ಆಪ್ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ವಾಗ್ವಾದ ನಡೆಸಿರೋ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಕೊಪ್ಪಳದ ಗಂಗಾವತಿಯ 23ನೇ ವಾರ್ಡ್ ನಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಆದ್ರೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ಪ್ರಶ್ನಿಸಿದಕ್ಕೆ ಶಾಸಕ ಅನ್ಸಾರಿ ಬೆಂಬಲಿಗರು, ಇದು ನಮ್ ಏರಿಯಾ… ನಮ್ ಕೆಲಸ ಹೆಂಗಾದ್ರು ಮಾಡ್ಕೋತೀವಿ ಅಂತಾ ಹೇಳಿದ್ದಾರೆ.

ಇದನ್ನು ವಿರೋಧಿಸಿದ ಆಪ್ ಕಾರ್ಯಕರ್ತರು ಮತ್ತು ಅನ್ಸಾರಿ ಬೆಂಬಲಿಗರ ನಡುವೆ ವಾಗ್ವಾದ ನೆಡೆದಿದೆ. ಸಿಸಿ ರಸ್ತೆಯ ಗುಣಮಟ್ಟದ ಬಗ್ಗೆ ಕೇಳುತ್ತಿದ್ದಂತೆ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *