ವಂಡರ್ ಲಾಗೆ ನುಗ್ಗಿದ ಚಿರತೆ- ಆತಂಕದಲ್ಲಿ ಪ್ರವಾಸಿಗರು

Public TV
0 Min Read

ರಾಮನಗರ: ಮಂಚನಾಯಕನಹಳ್ಳಿ ಬಳಿಯಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಚಿರತೆಯೊಂದು ನುಗ್ಗಿದ್ದು ಪ್ರವಾಸಿಗರು ಮತ್ತು ಸಿಬ್ಬಂದಿ ಆತಂಕದಲ್ಲಿದ್ದಾರೆ.

ವಂಡರ್ ಲಾ ಸಮೀಪದ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಬೆಂಕಿಯಿಂದ ಪಾರಾಗಲು ಚಿರತೆ ವಂಡರ್ ಲಾ ಗೆ ನುಗ್ಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

ಸ್ಥಳಕ್ಕೆ ಅರಣ್ಯಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.

Share This Article
Leave a Comment

Leave a Reply

Your email address will not be published. Required fields are marked *