2ನೇ ಮದುವೆಯ ಖರ್ಚಿಗೆ ಒಂಟಿ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

Public TV
0 Min Read

ರಾಮನಗರ: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಆರೋಪಿಯನ್ನ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇವೂರು ಮಂಡ್ಯ ಗ್ರಾಮದ ನಾಗೇಶ್ ಬಂಧಿತ ಆರೋಪಿ. ಇದೇ ತಿಂಗಳ 15 ರಂದು ಬೇವೂರು ಮಂಡ್ಯ ನಿವಾಸಿ ಸರೋಜಮ್ಮ ಎಂಬಾಕೆಯ ಕತ್ತು ಕೂಯ್ದು ಕೊಲೆ ಮಾಡಲಾಗಿತ್ತು. ಎರಡನೇ ಮದುವೆಯ ಖರ್ಚಿಗಾಗಿ ಆರೋಪಿ ನಾಗೇಶ್ ಸರೋಜಮ್ಮಳನ್ನು ಕೊಂದು ಚಿನ್ನಾಭರಣ ದೋಚಿದ್ದ.

ಘಟನೆ ಸಂಬಂಧ ಎಂಕೆ ದೊಡ್ಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 80 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *