ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

Public TV
1 Min Read

ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು.

ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕದ್ರವ್ಯ ಜಾಲದ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲಾಗ್ತಿದೆ. ಡ್ರಗ್ಸ್ ಕಣ್ಣಿಗೆ ಕಾಣದಂತೆ ಮರೆಯಾಗುವವರೆಗೆ ಇದು ಮುಂದುವರೆಯಲಿದೆ ಎಂದರು. ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಲ್ಲ. ಆದ್ರೂ ಕಾಲೇಜುಗಳಲ್ಲಿ ತೀವ್ರವಾದ ಮಾದಕದ್ರವ್ಯ ಪ್ರಸರಣ ಇಲ್ಲ ಎಂದು ನಂಬಿದ್ದೇನೆ ಅಂತ ಹೇಳಿದ್ರು.

ಮಾದಕದ್ರವ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ 170 ಮಂದಿಯನ್ನ ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದ್ರು.

ಕಾನೂನಿನ ಪ್ರಕಾರ ಸಣ್ಣ ಪ್ರಮಾಣದ ಡ್ರಗ್ಸ್ ಇದ್ದರೆ ವ್ಯಕ್ತಿಗೆ 8 ರಿಂದ 15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಜಾಮೀನು ಸಿಗುತ್ತದೆ. ಕೋರ್ಟ್ ಗಳೂ ಕೂಡ ಸಹಾನುಭೂತಿ ತೋರುತ್ತಿವೆ. ಆದ್ರೂ ತಪ್ಪಿತಸ್ಥರು ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದ್ರು.

ನಿರುದ್ಯೋಗದ ಬಗ್ಗೆ ಮಾತನಾಡಿದ ಪರಿಕ್ಕರ್, ಗೋವಾದ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಲು ಇಚ್ಛಿಸದ ಕಾರಣ ಸರ್ಕಾರಿ ಇಲಾಖೆಯೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸಕ್ಕೆ ಉದ್ದ ಕ್ಯೂ ಇದ್ದಿದ್ದು ಕಂಡಿತು. ಸರ್ಕಾರಿ ಕೆಲಸ ಅಂದ್ರೆ ಅಷ್ಟೇನು ಕಷ್ಟದ ಕೆಲಸವಲ್ಲ ಅಂತ ಜನ ಅಂದುಕೊಂಡಿದ್ದಾರೆ ಎಂದು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *