ಕ್ರಿಕೆಟ್ ಆಡಿ ಮಹದಾಯಿ ಪ್ರತಿಭಟನೆ – ಬ್ಯಾಟ್ ತಾಗಿ ಕಾರ್ಯಕರ್ತನ ತಲೆ ಓಪನ್

Public TV
1 Min Read

ದಾವಣಗೆರೆ: ಮಹದಾಯಿಗಾಗಿ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬ್ಯಾಟ್ ತಾಗಿ ಕಾರ್ಯಕರ್ತರ ತಲೆಗೆ ಗಂಭೀರ ಪೆಟ್ಟಾಗಿದೆ.

ಜಯದೇವ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಟವಾಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬ್ಯಾಟ್ ತಾಗಿ ಕರವೇ ಶಿವರಾಮೆ ಗೌಡರ ಬಣದ ಚನ್ನಗಿರಿ ತಾಲೂಕಿನ ಅಧ್ಯಕ್ಷ ಲೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುವಾಗ ಪಕ್ಕದಲ್ಲಿದ್ದ ಲೋಹಿತ್ ತಲೆಗೆ ಬ್ಯಾಟ್ ತಾಗಿದೆ.

ಬ್ಯಾಟ್ ತಾಗಿದ ಪೆಟ್ಟಿಗೆ ಲೋಹಿತ್ ತಲೆ ಓಪನ್ ಆಗಿದೆ. ಕೂಡಲೇ ಲೋಹಿತ್ ಅವರನ್ನು ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬಂದ್ ದಿನ ಅಂಗಡಿ ತೆರೆದ ವ್ಯಾಪಾರಿಗಳಿಗೆ ಕನ್ನಡ ಸಂಘಟನೆಗಳಿಂದ ಸನ್ಮಾನ

Share This Article
Leave a Comment

Leave a Reply

Your email address will not be published. Required fields are marked *