ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

Public TV
2 Min Read

ಮಂಗಳೂರು: ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಂಗಳೂರಿನ ದೀಪಕ್ ರಾವ್ ನಿವಾಸಕ್ಕೆ ಇಂದು ಬಿಗ್ ಬಾಸ್ ಸೀಸನ್ 4 ವಿಜೇತ ಪ್ರಥಮ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಮೃತ ದೀಪಕ್ ರಾವ್ ಕುಟುಂಬದ ಸಂಕಷ್ಟಕ್ಕೆ ಪ್ರಥಮ್ ಸ್ಪಂದಿಸಿದ್ದು, ಕುಟುಂಬದವರು ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಎಲ್ಲರೂ ಸಾಮರಸ್ಯದಿಂದ ಇರಬೇಕು. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಪರಿಹಾರವಾಗಿ ಐವತ್ತು ಸಾವಿರ ರೂಪಾಯಿಯನ್ನ ನೀಡಿದ್ದಾರೆ.

ಸದ್ಯ ಎಂ.ಎಲ್.ಎ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರಥಮ್ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೂ ನೇರವಾಗಿ ಮಂಗಳೂರಿಗೆ ಹೋಗಿ ಮೃತ ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ.

ಇಂದು ಮೃತ ಪಟ್ಟಿರುವ ಬಶೀರ್ ಸಾವಿಗೂ ಸಾಂತಾಪ ತಿಳಿಸಿದ್ದಾರೆ. “ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಬಶೀರ್ ರ ಆತ್ಮಕ್ಕೆ ಶಾಂತಿ ಸಿಗಲಿ. ಯಾರೇ ಆಗಲಿ ಕೊಲ್ಲುವುದು ತಪ್ಪು. ಈ ಹತ್ಯೆಮಾಡಿದ ಅಯೋಗ್ಯರಿಗೆ ಉಗ್ರ ಶಿಕ್ಷೆಯಾಗಲಿ. ಸುಂದರ ಸಮಾಜ ನಿರ್ಮಾಣವಾಗಬೇಕೆಂದರೆ ಇಂತಹ ಮುಗ್ಧರ ಹತ್ಯೆ ನಿಲ್ಲಬೇಕು” ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ದೀಪಕ್ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದು, ಬಹಳ ಪರಿಣಾಮಕಾರಿಯಾಗಿದೆ. ಈವರೆಗೆ ದೀಪಕ್ ತಾಯಿ ಪ್ರೇಮ ಅಕೌಂಟ್ ಗೆ ಬಿದ್ದಿರುವುದು 32 ಲಕ್ಷ ರುಪಾಯಿಗಳು. ಶುಕ್ರವಾರ ರಾತ್ರಿಯಷ್ಟೊತ್ತಿಗೆ 17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಶನಿವಾರ ರಾತ್ರಿಯವರೆಗೆ 32 ಲಕ್ಷ ರೂಪಾಯಿ ಹಣ ಜಮೆಯಾಗಿದೆ.

ದೀಪಕ್ ಹತ್ಯೆಯಾಗುವ ಮೊದಲು ತಾಯಿ ಪ್ರೇಮ ಅವರ ಖಾತೆಯಲ್ಲಿ ಎರಡೂವರೆ ಸಾವಿರ ರೂಪಾಯಿ ಹಣ ಇತ್ತು. ಸಾರ್ವಜನಿಕರ ಸಹಾಯ ಧನದ ಜೊತೆಗೆ ರಾಜ್ಯ ಸರ್ಕಾರ 5 ಲಕ್ಷ, ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 5 ಲಕ್ಷ ರುಪಾಯಿ ಕುಟುಂಬಕ್ಕೆ ಹಸ್ತಾಂತರವಾಗಿದೆ. ಚೆಕ್ಕನ್ನು ಇನ್ನೂ ಅಕೌಂಟಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿ ಬಿಜೆಪಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಒಟ್ಟು 52 ಲಕ್ಷ ರೂಪಾಯಿಯ ಆರ್ಥಿಕ ಸ್ಥೈರ್ಯ, ಧೈರ್ಯ ನೊಂದ ಕುಟುಂಬಕ್ಕೆ ಸಿಕ್ಕಿದೆ. ದೀಪಕ್‍ನ ನೂಂದ ಕುಟುಂಬಕ್ಕೆ ಎಲ್ಲಾ ಧರ್ಮದವರು ಸಹಾಯ ಹಸ್ತ ಚಾಚಿದ್ದಾರೆ. ಇಂದಿನವರೆಗೂ ಸಂದಾಯದ ಹಣ ಒಂದೂ ಕೋಟಿರೂಪಾಯಿಗೆ ತಲುಪಬಹುದು.

ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಜನವರಿ 3 ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದನ್ನು ಓದಿ: ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ

Share This Article
Leave a Comment

Leave a Reply

Your email address will not be published. Required fields are marked *