ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯಿಂದ ಅಮ್ಮನಿಗೆ ತಲಾಖ್ ಕೊಡಿಸಿದ!

Public TV
1 Min Read

ಮಂಡ್ಯ: ಆಸ್ತಿಗಾಗಿ ಸ್ವಂತಮಗನೇ ಗಂಡನಿಂದ ತಲಾಖ್ ಕೊಡಿಸಿದ್ದಾನೆ ಎಂದು ಹೆತ್ತ ತಾಯಿ ಆರೋಪ ಮಾಡುತ್ತಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಗ್ರಾಮದ ನಿವಾಸಿಗಳಾದ ಅಬ್ದುಲ್ ಮಜೀದ್ ಮತ್ತು ಫಾತೀಮಾ ಬೀ ಎಂಬ ವೃದ್ಧ ದಂಪತಿಗಳು ಮಗನ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ತಂದೆ ಮತ್ತು ತಾಯಿ ಹೆಸರನಲ್ಲಿರೋ ಆಸ್ತಿಗಾಗಿ ಇವರ ನಾಲ್ವರು ಮಕ್ಕಳು ವೃದ್ಧ ತಂದೆ-ತಾಯಿ ದಂಪತಿಯನ್ನು ಹೊರ ಹಾಕಿದ್ದಾರೆ. ಇನ್ನು ಇವರ ಕೊನೆಯ ಮಗ ನಾಗಮಂಗಲದಲ್ಲಿ ವಕೀಲನಾಗಿರೋ ಮಹಮದ್ ಗೌಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಂದೆಯಿಂದ ತಾಯಿಗೆ ತಲಾಖ್ ಕೊಡಿಸಿರುವುದಾಗಿ ಖಾಲಿ ಪೇಪರ್ ಗೆ ಸಹಿ ಮಾಡಿಸಿಕೊಂಡು ತವರಿಗೆ ಅಟ್ಟಿ ತನ್ನ ದುಷ್ಟತನ ಮೆರೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ವೃದ್ಧ ದಂಪತಿಗಳಿಗೆ ಒಟ್ಟು ಆರು ಜನ ಮಕ್ಕಳು. ಐದು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಹೆಣ್ಣು ಮಗಳು ಮತ್ತು ಹಿರಿಯ ಮಗನನ್ನು ಬಿಟ್ಟು ಉಳಿದ ನಾಲ್ವರು ಮಕ್ಕಳು ಆಸ್ತಿ ಬರೆಸಿಕೊಂಡು ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ್ದಾರಂತೆ. ಇದ್ರಿಂದ ಮಾನಸಿಕವಾಗಿ ನೊಂದು, ಬೆಂದಿರೋ ಈ ವೃದ್ಧ ಜೀವಗಳು ಈಗ ಮಂಡ್ಯದ ಹಿರಿಯ ನಾಗರೀಕರ ಸಹಾಯವಾಣಿಯ ಮೊರೆ ಹೋಗಿದ್ದಾರೆ.

ನಾನು ಪತ್ನಿಗೆ ತಲಾಖ್ ಕೊಟ್ಟಿಲ್ಲ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಆದ್ರೆ ಆಸ್ತಿಗಾಗಿ ಮಗ ಈ ರೀತಿ ಮಾಡಿದ್ದಾನೆ. ಹೀಗಾಗಿ ತಮಗೆ ಮೋಸ ಮಾಡಿ ಲಪಟಾಯಿಸಿರೋ ತಮ್ಮ ಆಸ್ತಿ ಮತ್ತು ಮನೆಯನ್ನು ವಾಪಸ್ಸು ಕೊಡಿಸಿ. ನಮಗೆ ರಕ್ಷಣೆ ಕೊಡಿಸಿ ಅಂತ ಈಗ ಇಲಾಖೆಗೆ ದೂರು ಕೊಟ್ಟಿದ್ದಾರೆ. ಅಲ್ದೆ ನಮಗೆ ಅದೇ ನಮ್ಮ ಮನೆಯಲ್ಲಿ ಬಾಳಲು ಅವಕಾಶ ಮಾಡಿ ಕೊಡಿ ಅಂತ ಮೊರೆ ಇಡ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *