ರೌಡಿಗಳ ನಿಯಂತ್ರಣ ಯಜ್ಞಕ್ಕೆ ಮುಂದಾದ ಬೆಂಗ್ಳೂರು ಪೊಲೀಸ್- ರಾತ್ರೋರಾತ್ರಿ ರೌಡಿ ಕಾಲಿಗೆ ಗುಂಡೇಟು

Public TV
1 Min Read

ಬೆಂಗಳೂರು: ನಗರದ ಪೊಲೀಸರ ರಿವಾಲ್ವರ್ ಮತ್ತೆ ಘರ್ಜಿಸಿದೆ. ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಆರ್‍ಎಂಸಿ ಯಾರ್ಡ್ ಇನ್ಸ್‍ಪೆಕ್ಟರ್ ಮಹ್ಮದ್ ಮುಖರಾಮ್, ರೌಡಿ ಅಶ್ವಥ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕಳೆದ ರಾತ್ರಿ ರಾಬರಿ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ರೌಡಿ ಅಶ್ವಥ್ ನನ್ನು ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಅಶ್ವಥ್ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ರಿವಾಲ್ವರ್‍ಗೆ ಕೆಲಸ ಕೊಟ್ಟ ಇನ್ಸ್ ಪೆಕ್ಟರ್ ಮಹ್ಮದ್, ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಅಶ್ವಥ್ ಬಲಗಾಲಿಗೆ ಗಾಯವಾಗಿದ್ದು, ಇದೀಗ ಆತನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಷ್ಟೇ ಕೋಣನಕುಂಟೆ ವ್ಯಾಪ್ತಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿತ್ತು. ರೌಡಿಶೀಟರ್ ಸಂತೂ ಅಲಿಯಾಸ್ ಪಳನಿ ಕಾಲಿಗೆ ಕೋಣನಕುಂಟೆ ಪೊಲೀಸರು ಗುಂಡು ಹಾರಿಸಿದ್ದರು.

ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ರೌಡಿಶೀಟರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ರೌಡಿಶೀಟರ್ ಪಳನಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹೀಗಾಗಿ ಭಾನುವಾರ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ರೌಡಿಶೀಟರ್ ಪಳನಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *