ಮೋದಿಯೆದುರು ಸಿದ್ದರಾಮಯ್ಯ ಬಚ್ಚ- ಮಾಜಿ ಸಿಎಂ ಯಡಿಯೂರಪ್ಪ

Public TV
1 Min Read

ಉಡುಪಿ: ಮೋದಿಯೆದುರು ಸಿದ್ದರಾಮಯ್ಯ ಬಚ್ಚ. ನಿನಗೆ ಯಾರು ಭಯಪಡ್ತಾರೆ ಸಿದ್ದರಾಮಯ್ಯಾ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯ ಮೇಲೆ ಒಂದೂ ಆರೋಪಗಳಿಲ್ಲ. ನಿನ್ನ ಮೈಮೇಲೆ ಆರೋಪಗಳ ಸುರಿಮಳೆಯೇ ಇದೆ. ಸಿಎಂ ಅಂತಹ ವ್ಯಕ್ತಿಗೆ ಪ್ರಧಾನಿ ಮೋದಿ ಹೆದರಬೇಕಾ ಅಂತ ಪ್ರಶ್ನೆಮಾಡಿದರು.

ಶ್ರೀಕೃಷ್ಣ- ಮಂಜುನಾಥಸ್ವಾಮಿ ಸಿಎಂ ಅವರನ್ನು ಕ್ಷಮಿಸಲ್ಲ. ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಬರದಿರುವುದು ಒಳ್ಳೆದಾಯ್ತು. ಸಿಎಂ ಬಂದ್ರೆ ಕೃಷ್ಣ ಮಠ ಅಪವಿತ್ರ ಆಗುತ್ತಿತ್ತು. ಧರ್ಮಸ್ಥಳ ದೇವಸ್ಥಾನಕ್ಕೆ ಸಿಎಂ ಮೀನು ಮಾಂಸ ತಿಂದು ಹೋದರು. ಮಂಜುನಾಥ ಸ್ವಾಮಿ ಬಾಗಿಲಲ್ಲೇ ತಡೆದು ನಿಲ್ಲಿಸಿದ. ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂದರು. ಶ್ರೀಕೃಷ್ಣ- ಮಂಜುನಾಥ ನಿನ್ನನ್ನು ಕ್ಷಮಿಸಲ್ಲ ಸಿದ್ದರಾಮಯ್ಯ ಎಂದು ಶಾಪ ಹಾಕಿದರು.

ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಿಎಂ ಆಗಲು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಯಾತ್ರೆ ಹೊರಟಿದ್ದೇನೆ ಎಂದರು.

ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇಂದು ಚಳಿಗಾಲದ ಅಧಿವೇಶನ ನಡೆಯಲು ಬಿಡಲ್ಲ ಎಂದು ಸವಾಲು ಹಾಕಿದರು. ಕ್ಲೀನ್ ಚಿಟ್ ಸಿಕ್ಕ ಎಲ್ಲ ಕೇಸು ಮರು ತನಿಖೆ ಮಾಡುತ್ತೇನೆ. ಸತ್ಯಾಂಶವನ್ನು ಹೊರಗೆಳೆಯುತ್ತೇನೆ ಅಂತ ಬಿಸೆ ವೈ ಹೇಳಿದ್ರು.

 

 

Share This Article
Leave a Comment

Leave a Reply

Your email address will not be published. Required fields are marked *