ಬಳ್ಳಾರಿಯಲ್ಲಿ ನಿಧಿಗಾಗಿ ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ್ರು..!

Public TV
1 Min Read

ಬಳ್ಳಾರಿ: ನಿಧಿ ಆಸೆಗಾಗಿ ದೇವಾಲಯದಲ್ಲಿನ ದೇವರ ಗದ್ದುಗೆಯನ್ನು ಒಡೆದು ದೇವರ ವಿಗ್ರಹಗಳನ್ನು ದ್ವಂಸಗೊಳಿಸಿದ ಘಟನೆ ಜಿಲ್ಲೆಯ ಹಡಗಲಿ ತಾಲೂಕು ಕಳಸಾಪುರ ಗ್ರಾಮದದಲ್ಲಿ ನಡೆದಿದೆ.

ತಾಲೂಕಿನ ಪುರಾತನ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ ಕಳಸಾಪುರ ಗ್ರಾಮದ ಬೆಟ್ಟದ ಮೇಲಿರುವ ಮಲ್ಲೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ನಿಧಿ ಶೋಧ ನಡೆಸಿದ್ದಾರೆ. ದೇವಾಲಯವು ಪುರಾತನ ಕಾಲದಲ್ಲಿ ನಿರ್ಮಾಣವಾಗಿದ್ದು, ದೇವರ ಮೂರ್ತಿ ಕೆಳಗೆ ಚಿನ್ನಾಭರಣ ಸಿಗುವ ಆಸೆಯಿಂದ ದುಷ್ಕರ್ಮಿಗಳು ವಿಗ್ರಹಗಳನ್ನು ಕಿತ್ತು ಗರ್ಭಗುಡಿಯಲ್ಲಿ ಬೃಹದಾಕಾರದ ಹಳ್ಳವನ್ನು ನಿರ್ಮಿಸಿದ್ದಾರೆ.

ಇಂದು ಮುಂಜಾನೆ ದೇವಾಲಯದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ನಿಧಿಯ ಆಸೆಯಿಂದ ದೇವರ ಮೂರ್ತಿಗಳನ್ನು ನಾಶಗೊಳಿಸಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *