ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

Public TV
0 Min Read

ಮಂಗಳೂರು: ಸೊಂಟಕ್ಕೆ ಏಟು ತಗುಲಿ ಮುಸುವ(ಲಂಗೂರ್ ಕೋತಿ)ವೊಂದು ಪರದಾಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ಬೆಳ್ತಂಗಡಿಯ ಪದ್ಮುಂಜ ಗ್ರಾಮದ ಮಲೆಂಗಲ್ಲು ರಕ್ಷಿತಾರಣ್ಯದಲ್ಲಿದ್ದ ಮುಸುವಗಳು ಆಹಾರ ಅರಸಿಕೊಂಡು ನಾಡಿಗೆ ಬಂದಿವೆ. ಬಾಳೆ, ಪಪ್ಪಾಯಿ ತಿನ್ನಲೆಂದು ಬಂದಿದ್ದಾಗ ಗುಂಡೇಟಿನ ಭಯದಿಂದ ಓಟ ಕಿತ್ತಾಗ ಈ ಮುಸಿಯ ಬಂಡೆ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡು ನರಳಿದೆ.

ಕೆಲ ಪ್ರಾಣಿಪ್ರಿಯರು ಮುಸುವಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ಮೂಲಕ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *