ಪತ್ನಿಯನ್ನು ಕೊಲೆ ಮಾಡಿ ಶರಣಾದ: ಸ್ಥಳಕ್ಕೆ ಭೇಟಿ ನೀಡಿದ ವೇಳೆ ಪೊಲೀಸರಿಗೆ ಶಾಕ್

Public TV
1 Min Read

ಬೆಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಮನೆಯಲ್ಲಿ ಜಗಳವಾಡಿ ಥಳಿಸಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೇ ಶರಣಾಗಿರುವ ಘಟನೆ ಬೆಂಗಳೂರಿನ ಚನ್ನನಾಯಕ ಪಾಳ್ಯದಲ್ಲಿ ನಡೆದಿದೆ.

ರಘುಗೌಡ ಎಂಬಾತ ಪತ್ನಿ ಪುಷ್ಪಲತಾಳನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿ ಬಗಲಗುಂಟೆ ಠಾಣೆಗೆ ಬಂದು ಶರಣಾಗಿದ್ದ.

ಆರೋಪಿಯ ಮಾತು ನಂಬಿ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಆತನನ್ನು ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಪತ್ನಿ ಎದ್ದು ಕುಳಿದ್ದನ್ನು ಕಂಡು ಶಾಕ್ ಆಗಿದ್ದಾರೆ.

ನಡೆದಿದ್ದು ಏನು: ಆರೋಪಿ ರಘುಗೌಡ ಕಂಠ ಪೂರ್ತಿ ಕುಡಿದು ತನ್ನ ಪತ್ನಿ ಪುಷ್ಪಲತಾಳನ್ನು ಥಳಿಸಿದ್ದಾನೆ. ಇದೇ ಸಂದರ್ಭದಲ್ಲಿ ಪತಿಯ ಹೊಡೆತಕ್ಕೆ ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದು, ಪ್ರಜ್ಞೆ ತಪ್ಪಿದ್ದಾಳೆ. ಇದನ್ನು ಕಂಡ ರಘುಗೌಡ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಪೊಲೀಸರಿಗೆ ಶರಣಾಗಿದ್ದ.

Share This Article
Leave a Comment

Leave a Reply

Your email address will not be published. Required fields are marked *